"ಕನ್ನಡತಿ' ಧಾರವಾಹಿಯ ಮೂಲಕ ಮನೆಮಾತಾಗಿದ್ದ ಖ್ಯಾತ ನಟ ಕಿರಣ್ ರಾಜ್ ಕಾರು ಅಪಘಾತಕ್ಕೀಡಾಗಿದ್ದು , ಕಾರು ಫುಲ್ ಜಖಂ ಆದ ಪರಿಣಾಮ ನಟನ ಎದೆಯ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿದೆ. ಕೆಂಗೇರಿ ಹತ್ತಿರದ ಬೆಂಗಳೂರು ಆಸ್ಪತ್ರೆಯಲ್ಲಿ ಕಿರಣ್ ರಾಜ್ ಅವರನ್ನು ದಾಖಲಿಸಲಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಇನ್ನೂ ಕಿರಣ್ ರಾಜ್ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಹಾಕಿದ್ದರಿಂದ ಬಚಾವ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಕಿರಣ್ ರಾಜ್ "ರಾನಿ' ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ನಾಳೆ ರಿಲೀಸ್ ಆಗಲಿದೆ.
ಇದೀಗ ಸಿನಿಮಾ ರಿಲೀಸ್ ಖುಷಿಯಲ್ಲಿದ್ದ ಕಿರಣ್ ರಾಜ್ ಅಭಿಮಾನಿಗಳು ವಿಷಯ ತಿಳಿದು ಆತಂಕಕ್ಕೊಳಗಾಗಿದ್ದಾರೆ. ಬೇಗ ಗುಣಮುಖರಾಗಿ ಬನ್ನಿ ಸರ್ ಎಂದು ಹಾರೈಸುತ್ತಿದ್ದಾರೆ.
ರಾನಿ ಚಿತ್ರ ಈಗಾಗಲೇ ಟ್ರೇಲರ್ ಮೂಲಕ ಭಾರೀ ಸದ್ದು ಮಾಡಿದ್ದು, ಗ್ಯಾಂಗ್ಸ್ಟರ್ ಡಾನ್ ಪಾತ್ರದಲ್ಲಿ ಕಿರಣ್ ರಾಜ್ ಅವರ ಜಬರ್ದಸ್ತ್ ಆಯಕ್ಷನ್ ಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
11/09/2024 12:51 pm