ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಹಬ್ಬದ ಸಮಯದಲ್ಲಿ ಬೆಂಗಳೂರಿನ ಮಾರ್ಕೆಟ್ ಗಳಲ್ಲಿ ಜನ ಸಾಗರವೇ ತುಂಬಿರುತ್ತದೆ. ಆದರೆ, ಗೌರಿ ಗಣೇಶ ಹಬ್ಬಕ್ಕೆ ಹೂವು, ಹಣ್ಣು ಬೆಲೆ ಏರಿಕೆ ಆಗಿದ್ಯಾ? ಕಳೆದ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಈ ವರ್ಷ ಮಾರ್ಕೆಟ್ ನಲ್ಲಿ ಪರಿಸ್ಥಿತಿ ಹೇಗಿದೆ. ನೋಡೋಣ ಬನ್ನಿ...
ಹಬ್ಬಗಳ ಸಮಯದಲ್ಲಿ ಸಾಮಾನ್ಯವಾಗಿ ಹೂವು, ಹಣ್ಣುಗಳ ಬೆಲೆ ಏರಿಕೆ ಆಗುತ್ತೆ. ಆದರೆ, ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ತುಂಬಾ ಕಡಿಮೆ ಆಗಿದೆ. ಆದರೂ ಸಹ ವ್ಯಾಪಾರ ಆಗುತ್ತಿಲ್ಲ ಎಂದು ಮಾರಾಟಗಾರರು ಹೇಳಿದ್ದಾರೆ.
ಆದ್ರೆ, ನಮ್ಮ ಸಿಲಿಕಾನ್ ಸಿಟಿ ಮಂದಿಗೆ ಬೆಲೆ ಏರಿಕೆಯಾಗಿದೆ ಅಂತೆ. ಇಷ್ಟೆಲ್ಲಾ ಹಣ ಕೊಟ್ಟು ಖರೀದಿ ಮಾಡೋದು ಹೇಗೆ. ಹಬ್ಬ ಮಾಡೋಕೆ ಭಯ ಆಗುತ್ತೆ. ಆದರೂ ಸಂಪ್ರದಾಯ ಮಾಡಲೇ ಬೇಕು ಎಂದು ಹೇಳಿದರು.
ಒಟ್ಟಾರೆ ಬೆಲೆ ಏರಿಕೆ ಆಗಲೀ, ಬಿಡಲಿ. ವರ್ಷಕ್ಕೊಂದು ಹಬ್ಬ, ಅದರಲ್ಲೂ ಮಹಿಳೆಯರಿಗೆ ಹಾಗೂ ಪುರುಷರಿಗೆ ತುಂಬಾ ಇಷ್ಟವಾದ ಗೌರಿಗಣೇಶ ಹಬ್ಬದ ಆಚರಣೆ ಬೇಕೇಬೇಕು ಎಂದು ಜನ ಶಾಪಿನ್ ನಲ್ಲಿ ಬ್ಯುಸಿಯಾಗಿದ್ದಾರೆ.
Kshetra Samachara
06/09/2024 07:04 pm