ಧಾರವಾಡ ಜಿಲ್ಲೆಗಳಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪೂರೈಕೆ ಆಗುತ್ತಿರುವ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿ ಸಾಕ್ಷಿ ಸಮೇತ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಡಂಗೆ ಪ್ರಶ್ನಿಸಿದಾಗ ಅವರು ಚಿಕ್ಕ ಮಕ್ಕಳ ಆಹಾರದಲ್ಲಿ ರಾಜಿ ಮಾತೇ ಇಲ್ಲ ಅಂದ್ರು....
ಈ ರೀತಿಯ ಕಳಪೆ ಆಹಾರ ಪೂರೈಕೆ ಮಾಡುವುದು ಅಪರಾಧ. ಆದಷ್ಟು ಬೇಗನೇ ಇದನ್ನು ಪರಿಶೀಲಿಸಿ MSPCಯನ್ನು ಮುಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಲಕ್ಷ್ಮೀ ಮೇಡಂ ಅವರೇ ಈ ರೀತಿ ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆಯಲ್ಲಿ ಇದೆ ಪರಿಸ್ಥಿತಿ ಇದೆ. ಆದಷ್ಟು ಪರಿಶೀಲಿಸಿ ಮಕ್ಕಳಿಗೆ ಆಹಾರ ಕೊಟ್ಟರೇ ಸೂಕ್ತ ಅನ್ನುವುದು ಪಬ್ಲಿಕ್ ನೆಕ್ಸ್ಟ್ ಕಳಕಳಿ....
PublicNext
06/09/2024 11:55 am