ಬೆಂಗಳೂರು : ಗೌರಿ ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಸಿಲಿಕಾನ್ ಸಿಟಿಯಲ್ಲಿ ಹಬ್ಬದ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಗಣೇಶನ ಖರೀದಿ, ಹೂವು ಹಣ್ಣು ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ. ಈ ನಡುವೆ ದುಪ್ಪಟ್ಟು ಆಗಿರುವ ಗಣೇಶ ವಿಗ್ರಹಗಳು ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದೆ.
ಹೌದು, ಈ ಬಾರಿ ಮಾರುಕಟ್ಟೆಗೆ ವಿಭಿನ್ನ ಗನೇಶಗಳೆನ್ನೋ ಎಂಟ್ರಿ ಕೊಟ್ಟಿದೆ ಆದ್ರೆ ಬೆಲೆ ಏರಿಕೆ ಬ್ಯುಸಿ ಜನರಿಗೆ ತತ್ತುವಂತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಗಣೇಶನ ಮೂರ್ತಿ ದುಪ್ಪಪ್ಪಾಗಿದೆ. ಈ ಬಾರಿ ಅನಿರೀಕ್ಷಿತ ಮಳೆಯಿಂದ ಬೆಲೆ ಏರಿಕೆ ಆಗಿದೆ. ಆದ್ರೂ ಬ್ಯುಸಿನೆಸ್ ಗೆ ಯಾವುದೇ ನಷ್ಟ ಇಲ್ಲ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ.
ಒಟ್ಟಾರೆ, ಗಣೇಶ ದುಬಾರಿ ಆದರೂ, ಜನರಲ್ಲಿ ಹಬ್ಬದ ಉತ್ಸಾಹ ಕಮ್ಮಿ ಏನು ಇಲ್ಲ. ಎಂದಿನಂತೆ ಜನ ಗಣೇಶನ ಮೂರ್ತಿ ಖರೀದಿ ಮಾಡುತ್ತಿದ್ದಾರೆ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿದೆ ಎಂದು ಮಾಲೀಕರು ತಿಳಿಸಿದ್ದಾರೆ.
PublicNext
05/09/2024 12:55 pm