ಕುಂದಗೋಳ: ಬಿಜೆಪಿ ಯುವ ಮೋರ್ಚಾ ಕುಂದಗೋಳ ಮಂಡಲ ನೇತೃತ್ವದಲ್ಲಿ ಇಂದು ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಕಾರ್ಗಿಲ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಸೇವೆ ಸಲ್ಲಿಸಿದ ಕುಂದಗೋಳ ಪಟ್ಟಣದ ಮಾಜಿ ಸೈನಿಕ ಶಿವಲಿಂಗಪ್ಪ ಹುಬ್ಬಳ್ಳಿ (ಧಾರವಾಡ) ಮತ್ತು ಶಂಕರಗೌಡ ಪಾಟೀಲ ಅವರಿಗೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಸನ್ಮಾನ ಮಾಡಲಾಯಿತು .
ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ತಾಲೂಕಾ ಅಧ್ಯಕ್ಷರಾದ ಬಸವರಾಜ ಚಿಕ್ಕ ಹರಕುಣಿ, ಕುಂದಗೋಳ ಪಟ್ಟಣದ ಹಿರಿಯ ಬಿಜೆಪಿ ಮುಖಂಡರಾದ ವಾಗೇಶ ಮಣಿಕಟ್ಟಿಮಠ, ನಾಗರಾಜ ಸುಬರಗಟ್ಟಿ, ಸುಭಾಷ ಸಾದರ, ಉಮೇಶ ಗದಿಗಿನ, ಸತೀಶ ಪಾಟೀಲ , ಸಿದ್ದು ಧಾರವಾಡ ಶೆಟ್ಟರ್, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಹರೀಶ ಕೊನೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ ಬೆನಕಣ್ಣನವರ ,ಯುವಮೋರ್ಚಾ ಉಪಾಧ್ಯಕ್ಷ ಮಂಜುನಾಥ ಭಂಡಿವಾಡ ,ಗೀರಿಶ ಗದಿಗಿನ ಮತ್ತು ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತಿ ಉಪಸ್ಥಿತರಿದ್ದರು.
Kshetra Samachara
26/07/2024 09:54 pm