ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಬೀಚ್. ಆದರೆ, ಈ ಸುಂದರ ಕಡಲ ತೀರ ಈಗ ತ್ಯಾಜ್ಯಗಳ ಆಗರವಾಗಿ ಇಡೀ ಪರಿಸರವೇ ದುರ್ನಾತ ಬೀರುತ್ತಿದೆ!
ಇಲ್ಲಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ಈ ಪ್ರವಾಸಿಗರು ಅಲ್ಲಿಯೇ ಬಿಸಾಡಿ ಹೋದ ತಂಪು ಪಾನೀಯ ಬಾಟಲಿಗಳು, ಬಿಸ್ಕೆಟ್ , ಚಾಕಲೇಟ್ ಇತ್ಯಾದಿ ತಿಂಡಿ ಪ್ಯಾಕೆಟ್ ಗಳು ಕಸಕಡ್ಡಿ ಸಹಿತ ಇತರ ತ್ಯಾಜ್ಯ ವಸ್ತುಗಳೊಂದಿಗೆ ಸೇರಿ ದುರ್ವಾಸನೆಯ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.
ತಕ್ಷಣ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ತ್ಯಾಜ್ಯ ತೆರವು ಮಾಡಬೇಕೆಂದು ಪ್ರವಾಸಿಗ ಕಿರಣ್ ಎಂಬವರು ಪಬ್ಲಿಕ್ ನೆಕ್ಟ್ಸ್ ಜೊತೆ ಮಾತನಾಡಿ ಆಗ್ರಹಿಸಿದ್ದಾರೆ.
ವರದಿ: ದಾಮೋದರ ಮೊಗವೀರ ನಾಯಕವಾಡಿ, ಪಬ್ಲಿಕ್ ನೆಕ್ಸ್ಟ್ ಬೈಂದೂರು
PublicNext
21/10/2024 10:30 pm