ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೊಕ್ಕೊಟ್ಟು ರೈಲ್ವೇ ಹಳಿ ಮೇಲೆ ಕಲ್ಲಿಟ್ಟವರು ಮಾದಕ ವ್ಯಸನಿಗಳೇ?

ಮಂಗಳೂರು: ನಗರದ ತೊಕ್ಕೊಟ್ಟು ಬಳಿ ರೈಲ್ವೇ ಹಳಿಯ ಮೇಲೆ ಕಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಯುತ್ತಿದೆ. ಈ ನಡುವೆ ಮಾದಕ ವ್ಯಸನಿಗಳು ಅಮಲೇರಿಸಿ ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ ಎಂಬ ಶಂಕೆ ಮೂಡಲಾರಂಭಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದಕ್ಷಿಣ ಕನ್ನಡದ ಸಂಸದರು ಹಾಗೂ ಶಾಸಕರು ಆಗ್ರಹಿಸಿದ್ದಾರೆ.

ಹೌದು... ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ಆದಿತ್ಯವಾರ ರಾತ್ರಿ ವೇಳೆ, ರೈಲ್ವೇ ಹಳಿಯಲ್ಲಿ ಭಾರೀ ಸದ್ದು ಕೇಳಿ ಬಂದಿದೆ. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣ ಆಗಿತ್ತು. ಸದ್ಯ ಈ ಕುರಿತು ತನಿಖೆ ನಡೆಯುತ್ತಿದ್ದು, ಕೃತ್ಯದ ಹಿಂದೆ ಮಾದಕ ವ್ಯವಸನಿಗಳ ಕೈವಾಡವಿತ್ತೇ ಎಂಬ ಶಂಕೆ ಮೂಡಿದೆ.

ರಾತ್ರಿ ವೇಳೆ ರೈಲ್ವೇ ಹಳಿಯಲ್ಲಿ ಅನೇಕ ಮಂದಿ ಗಾಂಜಾ ಮದ್ಯ ವ್ಯಸನಿಗಳು ಇರುತ್ತಾರೆ. ಇವರೇ ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನುವ ಅನುಮಾನವಿದೆ. ಈ ಬಗ್ಗೆ ರೈಲ್ವೇ ಪೊಲೀಸರಿಗೂ ಎಂಬ ಮಾಹಿತಿ ನೀಡಿದ್ದು, ರೈಲ್ವೇ ಹಳಿ ಮೇಲೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ತಿಳಿಸುವಂತೆ ರೈಲ್ವೇ ಅಧಿಕಾರಿಗಳು ಸೂಚಿಸಿದ್ದಾರೆ.

ಈ ನಡುವೆ ಪ್ರಾಥಮಿಕ ತನಿಖೆಯಲ್ಲಿ ಮಕ್ಕಳು ರೈಲ್ವೇ ಹಳಿಯ ಮೇಲೆ ಕಲ್ಲಿಟ್ಟಿದ್ದಾರೆ ಎಂದು ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡಿದೆ. ಆದರೆ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಸಮಗ್ರ ತನಿಖೆ ನಡೆಯಲೇಬೇಕು.

Edited By : Vinayak Patil
PublicNext

PublicNext

21/10/2024 09:03 pm

Cinque Terre

14.65 K

Cinque Terre

0

ಸಂಬಂಧಿತ ಸುದ್ದಿ