ಮಾಲೂರು : ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಶಾಸಕರ ಸ್ವಗ್ರಾಮ ಕೊಮ್ಮನಹಳ್ಳಿಯಲ್ಲಿ ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಕೋಲಾರ ಹಾಗೂ ಕೋಲಾರ ಹಾಲು ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ ಹಾಗೂ ಶಾಸಕ ಕೆ ವೈ ನಂಜೇಗೌಡ ದಂಪತಿಗಳು ಭಾಗವಹಿಸಿ ಉದ್ಘಾಟಿಸಿದರು.
ಈ ಸಮಯದಲ್ಲಿ ಪಶುಪಾಲನಾ ಇಲಾಖೆ ಜಿಲ್ಲಾ ನಿರ್ದೇಶಕ ಗಂಗಾ ತುಳಸಿ ರಾಮಯ್ಯ , ಉಪ ನಿರ್ದೇಶಕ ಡಾ. ವೀಣಾ , ಪ್ರಧಾನ ವ್ಯವಸ್ಥಾಪಕ ಡಾ. ಶ್ರೀನಿವಾಸ್ ಗೌಡ , ಮಾಲೂರು ಶಿಬಿರ ಕಛೇರಿಯ ಉಪ ವ್ಯವಸ್ಥಾಪಕ ಡಾ ಲೋಹಿತ್ , ಹಾಗೂ ವಿಸ್ತರಣಾಧಿಕಾರಿಗಳಾದ ಹುಲ್ಲೂರಪ್ಪ, ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
21/10/2024 07:36 pm