ಬಂಗಾರಪೇಟೆ : ಅಯೋಧ್ಯೆ ರಾಮಮಂದಿರ ದರ್ಶನಕ್ಕಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯುವಕರ ತಂಡವೊಂದು 1900 ಕಿಮೀ ಬೈಸಿಕಲ್ ಸವಾರಿಯನ್ನು ಹೊರಟ್ಟಿದ್ದಾರೆ. ಅಯೋಧ್ಯೆಯ ಬಾಲ ರಾಮನ ದರ್ಶನಕ್ಕಾಗಿ ಪಟ್ಟಣದ ವರದರಾಜು, ಗಗನ, ರವಿ, ಹರೀಶ್, ಸೈಕಲ್ ಯಾತ್ರೆಯ ಸಾಹಸಕ್ಕೆ ಕೈ ಹಾಕಿದ್ದಾರೆ. ಬಂಗಾರಪೇಟೆ ಪಟ್ಟಣದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯುವಕರ ತಂಡ ಯಾತ್ರೆಯನ್ನು ಆರಂಭಿಸಿದೆ. ಯುವಕರು ಅಯೋದ್ಯೆಯ ಬಾಲರಾಮನ ದರ್ಶನಕ್ಕೆ ಬೈಕ್ ರೈಲು ಸೇರಿದಂತೆ ಬೇರೆ ಬೇರೆ ಸಾಕಷ್ಟು ಭಕ್ತರು ಪ್ರಯಾಣವನ್ನು ಬೆಳೆಸುತ್ತಾರೆ ಆದರೆ ನಮಗೆ ಮೊದಲಿನಿಂದಲೂ ಸೈಕಲ್ ಮೂಲಕ ಅಯೋಧ್ಯೆಗೆ ಹೋಗಬೇಕೆಂಬ ಆಸೆ ಇತ್ತು. ಅದಕ್ಕೀಗ ಚಾಲನೆ ಸಿಕ್ಕಿದೆ ಎಂದು ಯುವಕರು ತಿಳಿಸಿದರು. ಯುವಕರ ಸೈಕಲ್ ಯಾತ್ರೆಗೆ ಹಲವಾರು ಸ್ನೇಹಿತರು ಶುಭ ಹಾರೈಸಿ ಬಿಳ್ಕೊಟ್ಟರು.
PublicNext
14/10/2024 03:17 pm