ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ, 23 ರಂದು ಆವನೀ ಶೃಂಗೇರಿ ಮಠದ ನೂತನ ಮಠಾಧಿಪತಿಗಳ ಪಟ್ಟಾಭಿಷೇಕ ಮಹೋತ್ಸವ

ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿರುವ ಶ್ರೀ ಆವನೀ ಶೃಂಗೇರಿ ಮಠದ ನೂತನ ಮಠಾದಿಪತಿಗಳ ಪಟ್ಟಾಭಿಷೇಕ ಮಹೋತ್ಸವವನ್ನು ಅ, ೨೩ರ ಬುಧವಾರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಆವನೀ ಶೃಂಗೇರಿ ಮಠದ ಟ್ರಸ್ಟಿ ಸಚ್ಚಿದಾನಂದಮೂರ್ತಿ ಅವ್ರು ತಿಳಿಸಿದ್ರು. ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಟಿ‌ ನಡೆಸಿ ಮಾತನಾಡಿದ ಅವರು, ಶ್ರೀ ಆವನೀ ಶೃಂಗೇರಿ ಮಠದ ನೂತನ ಮಠಾಧಿಪತಿಗಳಾದ ಶ್ರೀ ಅದ್ವೆöತಾನಂದ ಭಾರತೀ ಸ್ವಾಮಿಜೀಗಳ ಪಟ್ಟಾಭಿಷೇಕ ಮಹೋತ್ಸವವನ್ನು ವಿಧುಶೇಖರಭಾರತೀ ಸ್ವಾಮೀಜಿಗಳು ಅಮೃತಹಸ್ತದಿಂದ ನೆರವೇರಿಲಿದೆ ಎಂದರು. ೨೨ರ ಮಂಗಳವಾರ ಬೆಳಗ್ಗೆ ೯ಕ್ಕೆ ಗುರುಪ್ರಾರ್ಥನೆ, ಗಣಪತಿಪೂಜೆ, ಕಲಶಸ್ಥಾಪನೆ, ನವಗ್ರಹಹೋಮ, ಸಂಜೆ ೪ಕ್ಕೆ ಪೂರ್ಣಕುಂಭ ಸ್ವಾಗತ, ಸಿಂಹಾಸನಪೂಜೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿವೆ ಎಂದು ತಿಳಿಸಿದರು.

ಬೈಟ್ - ಶ್ರೀ ಆವನೀ ಶೃಂಗೇರಿ ಮಠದ ಟ್ರಸ್ಟಿ ಸಚ್ಚಿದಾನಂದಮೂರ್ತಿ

Edited By : PublicNext Desk
Kshetra Samachara

Kshetra Samachara

19/10/2024 07:50 pm

Cinque Terre

1.7 K

Cinque Terre

0