ಹಾಸನ: ಕಾಲುಬಾಯಿ ಲಸಿಕಾ ಅಭಿಯಾನದ ಪೋಸ್ಟರ್ ಅನ್ನು ಶಾಸಕ ಸ್ವರೂಪ ಪ್ರಕಾಶ್ ಇಂದು ತಮ್ಮ ಕಚೇರಿ ಆವರಣದಲ್ಲಿ ಬಿಡುಗಡೆ ಮಾಡಿದರು..
ಬಳಿಕ ಮಾತನಾಡಿದ ಅವರು ಹೈನುಗಾರಿಕೆ ರೈತರ ಪ್ರಮುಖ ಜೀವನಾಧಾರವಾಗಿರುವ ಹಾಸನ ಜಿಲ್ಲೆಯಲ್ಲಿ ಜಾನುವಾರುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು..
ಒಂದೆಡೆ ಹವಾಮಾನ ವೈಪರಿತ್ಯ ಹಾಗೂ ಮೇವಿನ ಸಮಸ್ಯೆಯಿಂದ ಜಾನುವಾರುಗಳು ಸಾವನ್ನಪ್ಪಿದರೆ ಇನ್ನೊಂದಡೆ ಕಾಲುಬಾಯಿ ಜ್ವರದಂತಹ ಮಾರಕ ಕಾಯಿಲೆಗಳು ದನ ಕರುಗಳನ್ನು ಬಾಧಿಸುತ್ತಿವೆ ಇದನ್ನು ಮನಗಂಡು ಸರ್ಕಾರ ಜಾನುವಾರುಗಳಿಗೆ ಲಸಿಕಾ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮನೆಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಕಾಲು ಬಾಯಿ ಜ್ವರದ ನಿರ್ಮೂಲನೆಗೆ ಸರ್ಕಾರ ಪಣತೊಟ್ಟಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
Kshetra Samachara
21/10/2024 11:10 am