ಹಾಸನ: ಹಾಸನಾಂಬ ಉತ್ಸವದ ಹಿನ್ನೆಲೆಯಲ್ಲಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಖಜಾನೆಯಿಂದ ಹಾಸನಂಬ ದೇವಿಯ ಒಡವೆಗಳನ್ನು ದೇವಾಲಯಕ್ಕೆ ತರಲಾಯಿತು.
ತಹಸಿಲ್ದಾರ್ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ದೇವಾಲಯದ ಅರ್ಚಕರ ಸಮ್ಮುಖದಲ್ಲಿ ಖಜಾನೆ ಎದುರು ಒಡವೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಅಲಂಕೃತ ಬೆಳ್ಳಿರಥದಲ್ಲಿ ಒಡವೆಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆತರಲಾಯಿತು. ಮೆರವಣಿಗೆ ಉದ್ದಕ್ಕೂ ಹಾಸನಾಂಬ ದೇವಿಯ ಪರ ಜಯಘೋಷ ಮೊಳಗಿದವು
Kshetra Samachara
21/10/2024 01:01 pm