ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ - ಮಲ್ಲಿಕಾರ್ಜುನ ಖರ್ಗೆ ಕಿಡಿ

ಕಲಬುರಗಿ: ಮಹಾರಾಷ್ಟ್ರದಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಕುರಿತು ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹಾಡ ಹಗಲೇ ಕಚೇರಿಗೆ ಹೋಗಿ ಶೂಟ್ ಮಾಡುವುದು ಅಂದರೆ ಏನು?

ಬಾಬಾ ಸಿದ್ದಿಕಿ ಅವರು 15 ದಿನ ಮುಂಚಿತವಾಗಿ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದರು.

ನನ್ನ ಮೇಲೆ ಜೀವ ಬೆದರಿಕೆ ಇದೆ. ನನ್ನ ಜೀವ ಉಳಿಯುತ್ತೋ ಇಲ್ಲವೋ ಎಂದು ಹೇಳಿದ್ದರು.

ಈ ವಿಷಯವಾಗಿ ಕಮಿಷನರ್ ಹಾಗೂ ಪೊಲೀಸರಿಗೂ ಮಾಹಿತಿ‌ಕೊಟ್ಟಿದ್ದರು. ಯಾಕೆ ಪೊಲೀಸರಾಗಲಿ ಸರ್ಕಾರವಾಗಲಿ ಅವರಿಗೆ ರಕ್ಷಣೆ ಕೊಡಲಿಲ್ಲ? ಇದರ ಅರ್ಥ ಮಾಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥಿತೆ ಹಾಳಾಗಿದೆ ಎಂದರ್ಥ. ಕಾನೂನು ಸುವ್ಯವಸ್ಥೆ ಅವರ ಹತೋಟಿಯಲ್ಲಿಲ್ಲ. ಯಾರ ಮಾತು ಕೇಳ‌ಬೇಕು ಯಾರ ಮಾತು ಕೇಳಬಾರದು ಗೊಂದಲದಲ್ಲಿದ್ದಾರೆ. ಮುಂದೆ ಬರುವ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿ‌ಕಾರಿದರು.

Edited By : Ashok M
PublicNext

PublicNext

13/10/2024 04:02 pm

Cinque Terre

26.95 K

Cinque Terre

2

ಸಂಬಂಧಿತ ಸುದ್ದಿ