ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಐಶಾರಾಮಿ ಜೀವನ, ಪೊಲೀಸರಿಗೆ ಹಣ ನೀಡಿದ್ರೆ ಸಿಗುತ್ತೆ ಐಷಾರಾಮಿ ಸೌಕರ್ಯ

ಕಲಬುರಗಿ: ನಟ ದರ್ಶನ್ ತೂಗುದೀಪ ಅವರ ಪ್ರಕರಣ ಕುರಿತು ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಎಲ್ಲವೂ ಸಿಗುತ್ತೆ ಎನ್ನುವ ಸುದ್ದಿ ಮಾಸುವ ಮುನ್ನವೇ ಕಲಬುರಗಿಯಲ್ಲಿಯು ಕೈದಿಗಳಿಗೆ ಎಲ್ಲಾ ಫೆಸಿಲಿಟಿಗಳು ಸಿಗುತ್ತೆ ಎನ್ನುವ ವಿಡಿಯೋ ಈಗ ವೈರಲ್ ಆಗಿದೆ. ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಕೈದಿಗಳ ಐಶಾರಾಮಿ ಜೀವನದ ಹಲವು ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣವದಲ್ಲಿ ಫುಲ್ ವೈರಲ್ ಆಗುತ್ತಿವೆ.ಸ್ಮಾಟ್೯ ಫೋನ್ ಬಳಸಿ ಸ್ನೇಹಿತರಿಗೆ ಕೈದಿಗಳಿಂದ ವೀಡಿಯೋ ಕಾಲ್, ಜೈಲಿನಲ್ಲಿ ಗಾಂಜಾ ಸೇದುತ್ತಾ ಸೆಲ್ಫಿಗೆ ಪೋಸ್ ನೀಡುತ್ತಿರುವ ಕೈದಿಗಳು, ಜೈಲಿನಲ್ಲಿ ವಿಶಾಲ, ಸಾಗರ ಹಾಗೂ ಸೋನು ಎಂಬ ಕೈದಿಗಳ ಐಶಾರಾಮಿ ಜೀವನದ ವಿಡಿಯೋಗಳು ವೈರಲ್ ಆಗ್ತಿದ್ದಾವೆ.

ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ವಿಚಾರಣಾಧೀನ ಕೈದಿಗಳಿಗೆ ಪೋಲಿಸರು ರಾಜತಿಥ್ಯ ನೀಡುತ್ತಿದ್ದಾರೆ ಎಂದು ಅನುಮಾನ ಕಾಡುತ್ತಿದೆ. ದರ್ಶನ್ ಆಪ್ತ ಸಹಾಯಕ ನಾಗರಾಜ್ ಅವರನ್ನು ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು ಉಳಿದ ಕೈದಿಗಳಂತೆ ನಾಗರಾಜ್‌ ಜೈಲಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆಯೇ ಎಂಬಾ ಅನುಮಾನ ವ್ಯಕ್ತವಾಗಿದೆ.

Edited By : Suman K
PublicNext

PublicNext

14/10/2024 03:40 pm

Cinque Terre

18.3 K

Cinque Terre

0