ಬೆಂಗಳೂರು: ಉಂಡು ಹೋದ ಕೊಂಡು ಹೋದ ಅನ್ನೋ ನಾಣ್ಣುಡಿಯನ್ನ ಇಂತಹ ಐನಾತಿಗಳನ್ನ ನೋಡಿಯೇ ಹಿರಿಯರು ಹೇಳಿರ್ಬೇಕು. ಆತ ಆ ಮಹಿಳೆಗೆ ಬಾಲ್ಯದ ಸ್ನೇಹಿತ. ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ರೂ ಅವರಿಬ್ರ ಸಂಬಂಧ ಮಾತ್ರ ಸ್ನೇಹವನ್ನ ಮೀರಿತ್ತು. ಮಹಿಳೆಯ ಮನೆಯಲ್ಲಿ ಮಹಿಳೆ ಒಬ್ಬಳೇ ಇರುವಾಗ ಈ ಐನಾತಿ ಹೋಗಿ ಬರ್ತಿದ್ದ.
ಕೋಲಾರ ಮೂಲದ ಚಿರಂಜೀವಿ ಪುಟ್ಟೇನಹಳ್ಳಿ ನಿವಾಸಿ ಮಹಿಳೆಯ ಈ ಸ್ನೇಹ ಸಾಕಷ್ಟು ದಿನಗಳಿಂದ ನಡೆದಿತ್ತು. ಈ ಮಧ್ಯೆ ಆಗಾಗ ಮಹಿಳೆ ಮನಗೆ ಹೋಗಿಬರ್ತಿದ್ದ ಚಿರಂಜೀವಿ ಕಷ್ಟ ಹೇಳಿಕೊಂಡು ಸುಮಾರು 63 ಗ್ರಾಂ ಚಿನ್ನಾಭರಣ ಪಡೆದು ಅಡಮಾನ ಇಟ್ಟಿದ್ದ. ಇಷ್ಟಕ್ಕೆ ಸುಮ್ಮನಾಗದ ಚಿರಂಜೀವಿ ಅಡಮಾನ ಇಟ್ಟಿದ್ದ ಒಡವೆ ಬಿಡಿಸಿಕೊಂಡು ಬರ್ತಿದ್ದೀನಿ ಅಂತ ಮತ್ತೆ ಮಹಿಳೆ ಮನೆಗೆ ಹೋಗಿದ್ದಾನೆ. ಈ ವೇಳೆ ಕಬೋರ್ಡ್ ನಲ್ಲಿದ್ದ ಇನ್ನಷ್ಟು ಚಿನ್ನವನ್ನ ಎತ್ತಿಕೊಂಡು ಬಂದಿದ್ದಾನೆ.
ಎಷ್ಟು ದಿನ ಆದ್ರೂ ಚಿನ್ನ ಬಿಡಿಸಿ ಕೊಡದೆ ಚಿರಂಜೀವಿ ಮಹಿಳೆಗೆ ಆಟ ಆಡಿಸುತ್ತಿದ್ದ. ಇದ್ರಿಂದ ಕೋಪಗೊಂಡ ಮಹಿಳೆ ಗಂಡನಿಗೆ ಗೊತ್ತಾದ್ರೆ ಮನೆಯಲ್ಲಿ ಜಗಳ ಆಗುತ್ತೆ ಅಂತ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ಳು. ಇನ್ನೂ ಚಿರಂಜೀವಿ ಬಂಧಿಸಲು ಪೊಲೀಸ್ರು ಪ್ರಯತ್ನಿಸಿದಾಗ ಚಿರಂಜೀವಿ ಪೋಕ್ಸೋ ಕೇಸ್ ನಲ್ಲಿ ಜೈಲು ಸೇರಿದ್ದ. ಜೈಲಿನಿಂದ ಬೇಲ್ ಮೇಲೆ ಹೊರಗಡೆ ಬರ್ತಿದ್ದಂತೆ ಪುಟ್ಟೇನಹಳ್ಳಿ ಪೊಲೀಸ್ರು ಆರೋಪಿಯನ್ನ ಬಂಧಿಸಿದ್ರು. ಆರೋಪಿ ಮಹಿಳೆಯಿಂದ ಪಡೆದಿದ್ದ ಚಿನ್ನವನ್ನ ಪೊಲೀಸ್ರು ಆಂಧ್ರದಲ್ಲಿ ಸೀಜ್ ಮಾಡಿದ್ದಾರೆ. ಆರೋಪಿಯಿಂದ ಸದ್ಯ ಆರು ಲಕ್ಷ ಮೌಲ್ಯದ 95 ಗ್ರಾಂ ಚಿನ್ನಾಭರಣವನ್ನ ಸೀಜ್ ಮಾಡಲಾಗಿದೆ.
PublicNext
22/10/2024 02:16 pm