ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಣ್ಣೆ ಹೊಡೆಯಲು ಹಣ ಹೊಂದಿಸಲು ಮನೆಗಳವು, ಐದನೇ ಬಾರಿ ಪೊಲೀಸ್ ಅತಿಥಿಯಾದ ಕಳ್ಳ

ಬೆಂಗಳೂರು : ಎಣ್ಣೆ ಹೊಡೆಯಲು ಹಣವಿಲ್ಲವೆಂದು ಮನೆಗಳ್ಳತನಕ್ಕಿಳಿಯುತ್ತಿದ್ದ ಕಳ್ಳನನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಫಯಾಜ್ ಅಲಿಯಾಸ್ ಪಯ್ಯು ಬಂಧಿತ ಆರೋಪಿ. ಮದ್ಯಪಾನದ ಚಟಕ್ಕೆ ಹಣ ಹೊಂದಿಸಲು ಕಳ್ಳತನಕ್ಕಿಳಿಯುತ್ತಿದ್ದ ಆರೋಪಿ, ಈ ಹಿಂದೆ ಹಲವು ಬಾರಿ ಸೆರೆವಾಸ ಅನುಭವಿಸಿದ್ದ.

ಇತ್ತೀಚಿಗೆ ಕೆ.ಆರ್.ಪುರಂ, ಶಿವಾಜಿನಗರ, ರಾಮಮೂರ್ತಿನಗರ, ಹಲಸೂರು ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡಿ ಜೈಲು ಸೇರಿದ್ದವನು ವಾರದ ಹಿಂದಷ್ಟೇ ಬಿಡುಗಡೆಯಾಗಿದ್ದ. ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕನ್ನ ಹಾಕಿದ್ದ ಆರೋಪಿ ಮತ್ತೆ ಪೊಲೀಸ್ ಅತಿಥಿಯಾಗಿದ್ದಾನೆ. ‌ಬಂಧಿತನಿಂದ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಎರಡು ಮನೆಗಳವು ಪ್ರಕರಣ ಪತ್ತೆಯಾಗಿದ್ದು, 12 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ ಬೆಳ್ಳಿ ಆಭರಣಗಳನ್ನ ಜಪ್ತಿ ಮಾಡಲಾಗಿದೆ.

Edited By : Suman K
PublicNext

PublicNext

22/10/2024 04:02 pm

Cinque Terre

10.2 K

Cinque Terre

0

ಸಂಬಂಧಿತ ಸುದ್ದಿ