", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/387839-1739018499-Untitled-design---2025-02-08T181135.993.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಚಿತ್ರಣ ಈಗ ಬಹುತೇಕ ಸ್ಪಷ್ಟವಾಗಿದೆ. ಇದರಲ್ಲಿ ಬಿಜೆಪಿ ಸರ್ಕಾರ ರಚಿಸುವ ಲಕ್ಷಣ ಕಾಣುತ್ತಿದೆ. ...Read more" } ", "keywords": "BJP Delhi Manifesto 2025, Free Schemes in Delhi, Delhi Election Promises, Rs 2500 Monthly for Women, LPG Cylinder Subsidy, Ayushman Bharat Scheme, Mahila Samridhi Yojana, Delhi Welfare Schemes, BJP Election Promises Delhi ,,Politics,Government", "url": "https://publicnext.com/node" }
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಚಿತ್ರಣ ಈಗ ಬಹುತೇಕ ಸ್ಪಷ್ಟವಾಗಿದೆ. ಇದರಲ್ಲಿ ಬಿಜೆಪಿ ಸರ್ಕಾರ ರಚಿಸುವ ಲಕ್ಷಣ ಕಾಣುತ್ತಿದೆ. ಈವರೆಗೆ, ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷ ಕೇವಲ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇನ್ನು, ಬಿಜೆಪಿ ಕೂಡ ಮಹಿಳೆಯರಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಪ್ರಯೋಜನಕಾರಿಯಾಗುವ ಪ್ರಮುಖ ಭರವಸೆಗಳನ್ನು ನೀಡಿತ್ತು. ಹಾಗಾದ್ರೆ ದೆಹಲಿಯ ಜನರಿಗೆ ಇನ್ಮುಂದೆ ಏನೆಲ್ಲಾ ಉಚಿತವಾಗಿ ಸಿಗುತ್ತದೆ? ಇಲ್ಲಿದೆ ವಿವರ.
*ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಬಡ ಮಹಿಳೆಯರಿಗೆ ತಿಂಗಳಿಗೆ 2500 ರೂ.
*ಬಡ ಮಹಿಳೆಯರಿಗೆ 500 ರೂ.ಗೆ ಸಿಲಿಂಡರ್ ಸಿಗಲಿದೆ ಮತ್ತು ಹೋಳಿ-ದೀಪಾವಳಿ ಸಂದರ್ಭದಲ್ಲಿ ಉಚಿತ ಸಿಲಿಂಡರ್ ಸಿಗಲಿದೆ.
*ಗರ್ಭಿಣಿಯರಿಗೆ 21 ಸಾವಿರ ರೂಪಾಯಿ ಆರ್ಥಿಕ ನೆರವು ಸಿಗಲಿದೆ.
*ದೆಹಲಿಯ ಜನರು 10 ಲಕ್ಷ ರೂ.ಗಳವರೆಗಿನ ಉಚಿತ ಚಿಕಿತ್ಸೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
*ಆಯುಷ್ಮಾನ್ ಯೋಜನೆಯು 5 ಲಕ್ಷ ರೂ.ಗಳವರೆಗಿನ ಚಿಕಿತ್ಸೆಯನ್ನು ನೀಡಲಿದ್ದು, ಉಳಿದ 5 ಲಕ್ಷ ರೂ.ಗಳನ್ನು ದೆಹಲಿಯ ಬಿಜೆಪಿ ಸರ್ಕಾರ ನೀಡಲಿದೆ ಎಂದು ಬಿಜೆಪಿ ಘೋಷಿಸಿತ್ತು.
*ಒಪಿಡಿ ಸೇವೆಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳು ಸಹ ಉಚಿತ ಎಂದು ಭರವಸೆ ನೀಡಲಾಗಿದೆ.
*ಈಗ ದೆಹಲಿಯ 1700 ಕ್ಕೂ ಹೆಚ್ಚು ಅನಧಿಕೃತ ವಸಾಹತುಗಳಲ್ಲಿ ವಾಸಿಸುವ ಜನರು ತಮ್ಮ ಮನೆಗಳ ಮಾಲೀಕತ್ವದ ಹಕ್ಕನ್ನು ಪಡೆಯುತ್ತಾರೆ.
*ಗಿಗ್ ಕಾರ್ಮಿಕರು ಮತ್ತು ಜವಳಿ ಕಾರ್ಮಿಕರಿಗೆ ತಲಾ 10 ಲಕ್ಷ ರೂಪಾಯಿಗಳ ಜೀವ ವಿಮೆ ಸಿಗಲಿದೆ.
*ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಿಗೆ 15 ಸಾವಿರ ರೂಪಾಯಿ ಆರ್ಥಿಕ ಸಹಾಯ ನೀಡಲಾಗುವುದು.
*ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 1000 ರೂ. ಸಹಾಯಧನ ಸಿಗಲಿದೆ.
PublicNext
08/02/2025 06:12 pm