ಚಿಕ್ಕಮಗಳೂರು : ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸೆರಾಯಿ ರೆಸಾರ್ಟ್ ಬಳಿ ರಸ್ತೆ ಪಕ್ಕದ ಜಾಗದಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತಿದೆ.
ಮನೆ, ಅಂಗಡಿ ಇನ್ನಿತರ ಕಸಗಳನ್ನು ಇಲ್ಲಿ ತಂದು ಕರೆಯುತ್ತಿದ್ದು ದುರ್ನಾಥ ಬೀರುತ್ತಿದೆ. ಕಸವನ್ನು ಬೀದಿ ನಾಯಿಗಳು ರಸ್ತೆಗೆ ಎಳೆಯುತ್ತಿವೆ, ಅಲ್ಲದೇ ಜಾನುವಾರುಗಳು ಪ್ಲಾಸ್ಟಿಕ್ ಅನ್ನು ತಿನ್ನುವ ಸಂಭವ ಹೆಚ್ಚಾಗಿದೆ. ಈ ಕುರಿತು ಜನಪ್ರತಿನಿಧಿಗಳು ಎಚ್ಚರ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
19/01/2025 01:14 pm