ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ವರುಣನ ಆರ್ಭಟ - ಕೊಚ್ಚಿ ಹೋದ ಕೆರೆಯ ಕೋಡಿ

ಹಾಸನ : ತಾಲೂಕಿನ ದುದ್ದ ಹೋಬಳಿಯ ಹಿರಿ ಕಡಲೂರು ಕರೆ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಹರಿದು ಬೆಳೆಗಳು ನೀರು ಪಾಲಾಗಿವೆ.

ಕೆರೆ ತುಂಬಿದ್ದರಿಂದ ರಭಸವಾಗಿ ಅಚ್ಚುಕಟ್ಟು ಪ್ರದೇಶದ ಮೇಲೆ ಹರಿದು, ನೂರಾರು ಎಕರೆ ಪ್ರದೇಶದ ಬೆಳೆ ಕೊಚ್ಚಿಹೋಗಿದೆ.

ಮೆಕ್ಕೆಜೋಳ, ಅಡಕೆ, ಶುಂಠಿ, ಎಲೆ ಕೋಸು ಮೊದಲಾದ ಬೆಳೆ ನೀರು ಪಾಲಾಗಿವೆ. ಆದಾಯದ ನಿರೀಕ್ಷೆಯಲ್ಲಿದ್ದ

ಅನ್ನದಾತ ಕಂಗಾಲಾಗಿದ್ದಾನೆ.

ದಶಕದ ಬಳಿಕ ಕೆರೆ ಭರ್ತಿಯಾಗಿದ್ದು, ನೀರಿನ ರಭಸಕ್ಕೆ ಕಳೆದ ರಾತ್ರಿ ಹೊಡೆದು ಅಪಾರ ಪ್ರಮಾಣದ ಹಾನಿಯಾಗಿದೆ. ಜೋರು ಮಳೆ ನೀರಿಗೆ ಹಿಂಗಾರು ಫಸಲು ಸಂಪೂರ್ಣ ನಾಶವಾಗಿದೆ. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು.

Edited By : Manjunath H D
PublicNext

PublicNext

22/10/2024 09:26 pm

Cinque Terre

6.83 K

Cinque Terre

0