ಸಕಲೇಶಪುರ: ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದರಿಂದಾಗಿ ಬೆಂಗಳೂರಿನಿಂದ ಹೊರಟಿದ್ದ ಖಾಸಗಿ ವಾಹನಗಳು ಹಾಗೂ ಸಾರ್ವಜನಿಕ ವಾಹನಗಳು ಸಕಲೇಶಪುರ, ದೋಣಿಗಲ್ ಭಾಗದಲ್ಲಿಯೇ ನಿಲ್ಲುವಂತಾಗಿದೆ. ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿದ್ದು, ಮುಂಜಾನೆ ತಲುಪಬೇಕಿದ್ದ ಬಸ್ಗಳು ಗಂಟೆಗಟ್ಟಲೆ ಆದರೂ ಶಿರಾಡಿ ದಾಟಲು ಸಾಧ್ಯವಾಗಿಲ್ಲ. ಒಂದೆಡೆ ಮಳೆಯೂ ಆಗುತ್ತಿದ್ದು, ವಾಹನಗಳ ದಟ್ಟಣೆ ಕೂಡ ಹೆಚ್ಚಾಗಿದೆ. ಪ್ರಯಾಣಿಕರಂತೂ ಪ್ರತಿಕ್ಷಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
PublicNext
13/10/2024 09:52 pm