ಶಿವಮೊಗ್ಗ : ವಿದ್ಯುತ್ ಸ್ಪರ್ಶದಿಂದ ಕೂಲಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮಲ್ಲಂದೂರಿನ ಕೋಲ್ಡ್ ಸ್ಟೋರೇಜ್ ಘಟಕದಲ್ಲಿಯೇ ಈ ದುರ್ಘಟನೆ ಸಂಭವಿಸಿದ್ದು, ಕೃಷ್ಣಮೂರ್ತಿ (46) ವಿದ್ಯುತ್ ಸ್ಪರ್ಷದಿಂದ ಸಾವು ಕಂಡ ದುರ್ದೈವಿಯಾಗಿದ್ದಾನೆ.
ಇಲ್ಲಿನ ಸಂತೋಷ್ ಆಗ್ರೋ ಸ್ಟೋರೇಜ್ ಎಂಬ ಘಟಕದಲ್ಲಿ ಕೂಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ, ಇಂದು ಘಟಕದಲ್ಲಿ ವಿದ್ಯುತ್ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ಸ್ಪರ್ಶವಾಗಿದೆ. ತಕ್ಷಣವೇ ಘಟನೆ ಕಂಡ ಸ್ಥಳಿಯ ಕಾರ್ಮಿಕರು, ಆನಂದಪುರದ ಸರ್ಕಾರಿ ಸಮುದಾಯ ಕೇಂದ್ರಕ್ಕೆ ದಾಖಲಿಸಿದರೂ. ಬದುಕುಳಿಯಲಿಲ್ಲ. ಈ ವೇಳೆ, ವೈದ್ಯರು, ಕಾರ್ಮಿಕನ ಸಾವನ್ನು ಧೃಢ ಪಡಿಸಿದ್ದಾರೆ. ಸ್ಥಳಿಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Kshetra Samachara
22/10/2024 07:48 pm