ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪ ಖಾಸಗಿ ಸಿಟಿ ಬಸ್, ಚರಂಡಿಗೆ ಪಲ್ಟಿಯಾಗಿ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಬೊಮ್ಮನಕಟ್ಟೆ ರಸ್ತೆಯಲ್ಲಿಯೇ ಈ ಘಟನೆ ನಡೆದಿದ್ದು, ವೀರಭದ್ರೇಶ್ವರ ಎಂಬ ನಗರ ಸಾರಿಗೆ ಖಾಸಗಿ ಬಸ್ ಇದಾಗಿದೆ. ಬಿದ್ದ ಬಸ್ಸಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೊಮ್ಮನಕಟ್ಟೆ ಬಡಾವಣೆಯಿಂದ ಗೋಪಾಳ ಬಡಾವಣೆಗೆ ಈ ಬಸ್ ತೆರಳುತ್ತಿತ್ತು ಎನ್ನಲಾಗಿದೆ.
ಇನ್ನು ಬಸ್ನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ, 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೊಮ್ಮನಕಟ್ಟೆ ರೈಲ್ವೆ ಗೇಟ್ನ ಪಕ್ಕದಲ್ಲಿ ಬರುತ್ತಿದ್ದ ಈ ಬಸ್ಸು, ಅತಿಯಾದ ವೇಗದಿಂದ ಬಂದಿದ್ದು, ಈ ವೇಳೆ ಹಂಪ್ ಹಾರಿ ಸ್ಟೇರಿಂಗ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬವನ್ನು ಉರುಳಿಸಿ 10 ಮೀಟರ್ ಕಬ್ಬಿಣದ ಫೆನ್ಸಿಂಗ್ ಅನ್ನು ಕೂಡ ಉರುಳಿಸಿ ಚರಂಡಿಗೆ ಉರುಳಿದೆ. ಘಟನೆ ನಡೆಯುತ್ತಿದ್ದಂತೆ, ಸಾರ್ವಜನಿಕರ ಸಹಕಾರದಿಂದ ಗಾಯಾಳುಗಳನ್ನು ಖಾಸಗಿ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
16/10/2024 10:55 am