ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸಂಪುಟದ ಮತ್ತೊರ್ವ ಸಚಿವರಿಗೆ ಸಂಕಷ್ಟ ಎದುರಾಗಿದೆ, ಸಚಿವ ಬೋಸರಾಜು ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಅಧಿಕಾರ ದುರುಪಯೋಗ ಮಾಡಿಕೊಂಡು ಸಚಿವ ಎನ್ ಎಸ್ ಬೋಸರಾಜು ಕುಟುಂಬ ಅರಣ್ಯ ಒತ್ತುವರಿ ಮಾಡಿಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಯಚೂರು ಜಿಲ್ಲೆಯ ಅರಣ್ಯ ಪ್ರದೇಶದ 1252 , 1253 , ಮತ್ತು 1245 ಸರ್ವೆ ನಂಬರ್ಗಳಲ್ಲಿ, ಒಟ್ಟಾರೆ 5 ಎಕರೆ ಮೀಸಲು ಅರಣ್ಯ ಪ್ರದೇಶ ಒತ್ತವರಿ ಮಾಡಿಕೊಳ್ಳಲಾಗಿದೆ. ಬೋಸರಾಜು ಅವರ ಪತ್ನಿ ಎನ್ ಕೃಷ್ಣವೇಣಿ ಅರಣ್ಯ ಒತ್ತವರಿ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಸಚಿವ ಬೋಸರಾಜುಅಧಿಕಾರ ದುರುಪಯೋಗ ಮಾಡಿ , ಸ್ವಜನ ಪಕ್ಷಪಾತ ಮಾಡಿ ಅರಣ್ಯ ಭೂಮಿ ಕಬಳಿಕೆ ಮಾಡಿದ್ದಾರೆ.ಅರಣ್ಯ ಒತ್ತುವರಿ ಆರೋಪ ಹೊಂದಿರುವ ಬೋಸರಾಜು ಅವರನ್ನ ಸಚಿವ ಸ್ಥಾನದಿಂದ ಕೈ ಬಿಡಲು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
PublicNext
21/10/2024 08:04 pm