ಶ್ರೀನಗರ : ಗಗಾಂಗಿರ್ ಭಯೋತ್ಪಾದಕ ದಾಳಿಯಲ್ಲಿ ವಲಸೆ, ಬಡ ಕಾರ್ಮಿಕರು ಮತ್ತು ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಒಂದು ಅತ್ಯಂತ ದುರದೃಷ್ಟಕರ ಸಂಗತಿ. ಇಂತಹ ಕೃತ್ಯದಿಂದ ಭಯೋತ್ಪಾದಕರಿಗೆ ಏನು ಸಿಗುತ್ತೆ.? ಅವರು 'ಕಾಶ್ಮೀರವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಆದ್ರೆ ನಾವು ಎಂದೂ ಹಾಗೆ ಆಗಲೂ ಬಿಡಲ್ಲ, ನಾವು ಇದನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪಾಕಿಸ್ತಾನದ ನಾಯಕತ್ವಕ್ಕೆ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನ ನಾಯಕರು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಭಯಸುತ್ತಾರೆ. ಹಾಗಾದ್ರೆ ಅವರು ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು. 'ಪಾಕಿಸ್ತಾನ ನಹೀ ಬನೇಗಾ' ಇದು ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಮಯ, ಇಲ್ಲದಿದ್ದರೆ ಪರಿಣಾಮ ತುಂಬಾ ತೀವ್ರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
21/10/2024 05:43 pm