ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಟ್ರಸ್ಟಿ ಸುಧಾ ಮೊಗವೀರ : ಬಗ್ವಾಡಿ ದೇವಸ್ಥಾನಕ್ಕೆ ಭೇಟಿ

ಬೈಂದೂರು:

ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಟ್ರಸ್ಟಿ ಸುಧಾ ಮೊಗವೀರ : ಬಗ್ವಾಡಿ ದೇವಸ್ಥಾನಕ್ಕೆ ಭೇಟಿ.

ಬೈಂದೂರು: ಮೊಗವೀರ ಸಮಾಜದ ಕುಲಮಾತೆ ಶ್ರೀ ಕ್ಷೇತ್ರ ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ದೇವರ ಮುಡಿಗಂಡ ಪ್ರಸಾದ ಸ್ವೀಕರಿಸಿದರು,

ನಂತರ ಸಮುದಾಯದ ಸಮಾಜ ಬಾಂಧವರ ಪರವಾಗಿ ಬಗ್ವಾಡಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮೊಗವೀರ ಮಹಜನ ಸೇವಾಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷರು ಉದಯ್ ಕುಮಾರ್ ಹಟ್ಟಿಯಂಗಡಿ ಮಾತನಾಡಿ ಈ ಹಿಂದಿನ ಕೊಲ್ಲೂರು ದೇವಳದ ಆಡಳಿತ ಮಂಡಳಿಯ ವ್ಯೆವಸ್ಥಾಪನ ಸಮಿತಿಯ ಸದಸ್ಯರಾದ ರತ್ನ ರಮೇಶ್ ಕುಂದರ್ ರವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಅವರಂತೆ ಇವರು ಸಹ ಉತ್ತಮ ಕಾರ್ಯನಿರ್ವಹಿಸಲಿ ಸಮಾಜಕ್ಕೆ ಹಾಗೂ, ಸಾರ್ವಜನಿಕ ಭಕ್ತಾದಿಗಳಿಗೆ ಒಳ್ಳೆಯ ಮಾರ್ಗದರ್ಶಕರಾಗಲಿ ಎಂದು ಶುಭ ಹಾರೈಸಿದರು . ಕಾರ್ಯದರ್ಶಿ ಪ್ರಭಾಕರ್ ಸೇನಾಪುರ, ಕೋಷಾಧಿಕಾರಿ ಸತೀಶ್ ಎಮ್ ನಾಯ್ಕ್, ಉಪಾಧ್ಯಕ್ಷರಾದ ನಾಗೇಶ್ ಪಿ ಕಾಂಚನ್, ಮತ್ತು ಜಗದೀಶ್ ಮೊಗವೀರ ಮಾರ್ಕೋಡು, ರಮೇಶ್ ಕುಂದರ್, ಕೊಲ್ಲೂರು,ರತ್ನ ರಮೇಶ್ ಕುಂದರ್, ಹೆಮ್ಮಾಡಿ ಘಟಕ ಅಧ್ಯಕ್ಷ ದಿನೇಶ್ ಬಿ ಕಾಂಚನ್, ನಿಕಟ ಪೂರ್ವ ಅಧ್ಯಕ್ಷ ಲೋಹಿತಾಶ್ವ ಆರ್ ಕುಂದರ್, ದೇವಸ್ಥಾನದ ಮ್ಯಾನೇಜರ್ ವಾಸು ಜಿ ನಾಯ್ಕ್, ಆನಂದ್ ಕೆ ನಾಯ್ಕ್, ಸ್ತ್ರೀ ಶಕ್ತಿ ಸದಸ್ಯರು ಸುಮತಿ ಉದಯ್ ಕುಮಾರ್,ಬೇಬಿ ಜಿ ನಾಯ್ಕ್,ಸುಮಿತ್ರ ಆನಂದ್ ಮೊಗವೀರ ಹಾಗೂ ದೇವಸ್ಥಾನ ಸಿಬ್ಬಂದಿ ರಾಘವೇಂದ್ರ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/10/2024 02:34 pm

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ