ಚಳ್ಳಕೆರೆ : ಹಳ್ಳ ಹರಿಯುವುದನ್ನ ವೀಕ್ಷಣೆ ಮಾಡಲು ಹೋದ ಬಾಲಕನೊಬ್ಬ ಹಳ್ಳದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿರುವಾಗ ರಕ್ಷಣೆ ಮಾಡಿದ ಘಟನೆ ಚಳ್ಳಕೆರೆ ತಾಲ್ಲೂಕಿನ ಮಲ್ಲೂರುಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವಕ ನೀರು ಹರಿಯುತ್ತಿರುವುದನ್ನ ನೋಡಲು ಹೋಗಿದ್ದಾನೆ. ಹಳ್ಳ ವೀಕ್ಷಣೆ ಮಾಡುತ್ತಿರುವಾಗ ಏಕಾಏಕಿ ನೀರು ರಭಸವಾಗಿ ಹರಿದು ಬಂದ ಹಿನ್ನೆಲೆಯಲ್ಲಿ ಹಳ್ಳದ ನೀರಿಗೆ ಸಿಲುಕಿದ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಹಳ್ಳದಲ್ಲಿ ಇದ್ದ ಗಿಡದ ರೆಂಬೆ ಹಿಡಿದು ನಿಂತು ಕೊಂಡಿದ್ದಾನೆ. ಈ ವೇಳೆ ಅಲ್ಲೆ ಇದ್ದ ಗ್ರಾಮಸ್ಥರು ಹಗ್ಗದ ಸಹಾಯದಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನ ಹೊರಗಡೆ ತಂದಿದ್ದಾರೆ.
PublicNext
20/10/2024 06:11 pm