ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಚಿರತೆ ದಾಳಿಗೆ ಪ್ರಾಣ ತೆತ್ತ ನಾಯಿ- ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಅಳ್ನಾವರ: ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸುಮಾರು ದಿನಗಳಿಂದ ತಮ್ಮ ಸುತ್ತ ಮುತ್ತಲಲ್ಲೇ ಚಿರತೆಯೊಂದು ಓಡಾಡುತ್ತಿದೆ ಎಂಬ ಅನುಮಾನ ಕೋಗಿಲಗೇರಿ ಗ್ರಾಮಸ್ಥರಲ್ಲಿ ಮೂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿಯ ವರೆಗೆ ಸುಮಾರು ನೂರರ ಆಸುಪಾಸಿನಷ್ಟು ಆಡು-ಕುರಿಗಳು, ಮೂವತ್ತಕ್ಕೂ ಹೆಚ್ಚು ನಾಯಿಗಳು ಕಾಣೆಯಾಗಿದ್ದವು. ಯಾವುದೋ ಪ್ರಾಣಿಗೆ ಬಲಿಯಾಗಿರಬಹುದು ಎಂಬ ಅನುಮಾನಕ್ಕೆ ಬಂದಿದ್ದರೂ ಎಲ್ಲಿಯೂ ಅವುಗಳ ಅವಶೇಷಗಳು ದೊರೆಯದ ಕಾರಣ ಗ್ರಾಮಾಸ್ಥರು ಸುಮ್ಮನಾಗಿದ್ದರು.

ನಿನ್ನೆ ರಾತ್ರಿ ಸಂಗಮೇಶ ದುಪ್ಪದಾಳ ಎಂಬುವವರ ತೋಟದ ಮನೆಗೆ ಚಿರತೆ ನುಗ್ಗಿದೆ. ಅಲ್ಲಿಯೇ ಇದ್ದ ನಾಯಿಯ ಮೇಲೆ ಎರಗಿ ಅದನ್ನು ಕೊಂದು ಎಳೆದು ಕೊಂಡು ಹೋಗಿದೆ. ಇದಿಷ್ಟು ಸಂಗಮೇಶ ದುಪ್ಪದಾಳ ಅವರು ತೋಟದ ಮನೆಗೆ ಅಳವಡಿಸಿದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದರ ಬಗ್ಗೆ ಅರಣ್ಯ ಇಲಾಖೆಯವರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕ್ರಮ ತೆಗೆದುಕೊಂಡಿಲ್ಲ. ಮುಂದೆನಾಗುತ್ತೆ ಎಂಬ ಭಯದ ವಾತಾವರಣದಲ್ಲಿ ಕೋಗಿಲಗೇರಿ ಗ್ರಾಮಸ್ಥರು ಬದುಕುತ್ತಿದ್ದಾರೆ ಎಂದು ರುದ್ರಪ್ಪ ಮಟಿಗೇರ ಆತಂಕ ವ್ಯಕ್ತಪಡಿಸಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/10/2024 04:28 pm

Cinque Terre

204.23 K

Cinque Terre

1

ಸಂಬಂಧಿತ ಸುದ್ದಿ