ಮೈಸೂರು: ಮುಡಾ ಹಗರಣದಲ್ಲಿ ಬರೋಬ್ಬರಿ 5 ಸಾವಿರ ಕೋಟಿ ಅಕ್ರಮ ಆಗಿದೆ ಎಂದು ನಾನೇ ಇಡಿಗೆ ದೂರು ಕೊಟ್ಟಿದ್ದು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಇಡಿ ವಿಚಾರಣೆಗೆ ಕರೆದಿತ್ತು. ಆ ವೇಳೆ ದಾಖಲೆ ಸಮೇತ ಎಲ್ಲಾ ಮಾಹಿತಿ ನೀಡಿದ್ದೇನೆ. ಅಲ್ಲದೆ ಇದು 2015ರಿಂದ ಇಲ್ಲಿಯವರೆಗೂ 50:50ರ ಅನುಪಾತದ ಎಲ್ಲಾ ಸೈಟ್ ತನಿಖೆ ಆಗಬೇಕೆಂದು ಇಡಿಗೆ ದೂರು ನೀಡಿರುವೆ. ಆ ದೂರಿಮ ಅನ್ವಯ ಈ ದಾಳಿ ಆಗಿದೆ ಎಂದರು.
PublicNext
19/10/2024 08:58 am