ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ ವಿರುದ್ದ ಬಿಜೆಪಿ ಹೋರಾಟ ನಡೆಸಲಿದೆ - ಡಾ.ಭರತ್ ಶೆಟ್ಟಿ

ಮಂಗಳೂರು: ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷಹುಬ್ಬಳ್ಳಿ ಘಟನೆ, ಹಿಜಾಬ್ ಹೋರಾಟ ಸಹಿತ ಮುಸ್ಲಿಂ ವರ್ಗದ ಪೊಲೀಸ್‌ ಕೇಸುಗಳನ್ನು ವಾಪಾಸ್ ಪಡೆದು ಹಿಂದೂಗಳ ಮೇಲಿನ ಕೇಸ್ ಹಿಂದಕ್ಕೆ ಪಡೆಯದೆ ದಮನಕಾರಿ ನೀತಿ ಅನುಸರಿಸುತ್ತಿದೆ.

ಸರಕಾರ ಹಚ್ಚುತ್ತಿರುವ ತಾರತಮ್ಯದ ಬೆಂಕಿ ಭವಿಷ್ಯದಲ್ಲಿ ಕಾಂಗ್ರೆಸ್‌ನ್ನು ಸುಡಲಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿವೈ ಹೇಳಿದ್ದಾರೆ.

ನಿಮ್ಮಸರಕಾರದ ಹಗರಣವನ್ನು ಮರೆ ಮಾಚಲು ವಿಷಯಾಂತರ ಮಾಡುತ್ತಿರುವುದು ತಿಳಿಯದ ವಿಚಾರವಲ್ಲ.ರಾಜ್ಯವನ್ನು ಅಭಿವೃದ್ಧಿಯತ್ತಾ ಕೊಂಡೊಯ್ಯುವ ಬದಲು ಹಿಂದೂಗಳನ್ನು ಬಗ್ಗು ಬಡಿಯುವ ಕೆಲಸಕ್ಕೆ ಕೈ ಹಾಕಿರುವುದು ದುರಂತ.

ಸರಕಾರ ಹಿಂದೂಗಳನ್ನು ತುಳಿದಷ್ಟೂ ಬಲಿಷ್ಠವಾಗುತ್ತಾ ಹೋಗುತ್ತದೆ. ಕೇವಲ ಅಲ್ಪ ಸಂಖ್ಯಾತರ ಮತದಿಂದ ಮಾತ್ರ ನಿಮ್ಮಸರಕಾರ ಅಸ್ಥಿತ್ವಕ್ಕೆ ಬಂದಿಲ್ಲ.

ಹಿಂದೂ ಸಮುದಾಯವೂ ನಿಮ್ಮನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂರಿಸಿದ್ದಾರೆ. ಇದೀಗ ಕೇವಲ ಒಂದು ವರ್ಗಕ್ಕೆ ಮಾತ್ರ ಸವಲತ್ತು, ಕಾನೂನು ವಾಪಾಸ್‌ ಮತ್ತಿತರ ಸೌಲಭ್ಯ ಕಲ್ಪಿಸುತ್ತುತ್ತಿರುವುದು ಹಿಂದೂ ವಿರೋಧಿ ಎಜೆಂಡಾದ ಒಂದು ಸಂಚು ಎಂದು ಆರೋಪಿಸಿರುವ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು, ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ ವಿರುದ್ದ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

18/10/2024 07:52 pm

Cinque Terre

168

Cinque Terre

0

ಸಂಬಂಧಿತ ಸುದ್ದಿ