ಬೆಂಗಳೂರು : ಸದ್ಯ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನಿರ್ಮಾಪಕ ಭರತ್ ಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. 2022ರಲ್ಲಿ ಕೊಲೆ ಬೆದರಿಕೆ ಸಂಬಂಧ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನಟ ದರ್ಶನ್, ನಾಗರಾಜ್, ಧ್ರುವನ್, ಅನೂಪ್ ಆಂಟೋನಿ, ಅರುಣ್ ಸುರೇಶ್ ವಿರುದ್ಧ ದೂರು ದಾಖಲಾಗಿತ್ತು. ಆ ಸಮಯದಲ್ಲಿ ಪೊಲೀಸರು ಎಸ್.ಸಿ.ಆರ್ ಹಾಕಿ, ವಿಚಾರಣೆ ನಡೆಸಿ ಕೇಸ್ ಕ್ಲೋಸ್ ಮಾಡಿದ್ರು. ನಿರ್ಮಾಪಕ ಭರತ್ ಕಳೆದ ಜುಲೈ 26ರಂದು ಮತ್ತೆ ಪೊಲೀಸರಿಗೆ ದೂರು ಮತ್ತೆ ಅರ್ಜಿ ಸಲ್ಲಿಸಿದ್ದರು.
ದರ್ಶನ್, ನಾಗ, ಧ್ರುವನ್, ಅನೂಪ್ ಅಂಟೋನಿ ಸೇರಿ 5 ವಿರುದ್ಧ ಕ್ರಮಕ್ಕೆ ಅರ್ಜಿ ಸಲ್ಲಿಸಿದ ನಂತರ ಮತ್ತೆ ಆರೋಪಿಗಳ ವಿಚಾರಣೆ ನಡೆಸಿ ಡಿಸಿಪಿಗೆ ವರದಿ ಸಲ್ಲಿಕೆ ಮಾಡಲಾಗಿತ್ತು.
ಅಗಸ್ಟ್ 5ರಂದು ದರ್ಶನ್ ಬೆದರಿಕೆ ಕೇಸ್ ಕ್ಲೊಸ್ ಮಾಡಲು ಅನುಮತಿಗೆ ಪತ್ರವನ್ನ ಬರೆಯಲಾಗಿತ್ತು. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರೋ ಕಾರಣ ದರ್ಶನ್ ಹೇಳಿಕೆ ಪಡೆಯಲಾಗಲಿಲ್ಲ. ಭರತ್ ಸಲ್ಲಿಸಿದ ದೂರು ಅರ್ಜಿ ಹಣಕಾಸಿಗೆ ಸಂಬಂಧಿತ ವಿಚಾರವಾಗಿದ್ದು, ನ್ಯಾಯಲಯ ಅಥಾವ ಸಕ್ಷಮ ಪ್ರಾಧಿಕಾರದ ಮುಂದೆ ಇತ್ಯಾರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ಹಿಂಬರ್ ನೀಡಿ ಅರ್ಜಿ ವಿಚಾರಣೆ ಮುಕ್ತಾಯ ಮಾಡಲು ಡಿಸಿಪಿಗೆ ಪತ್ರ ಬರೆಯಲಾಗಿತ್ತು.
ಆದರೆ ಈಗ ನಟ ದರ್ಶನ್, ನಟ ಧ್ರುವನ್ ಹಾಗೂ ಮ್ಯಾನೆಜರ್ ನಾಗನ ವಿರುದ್ಧ ದೂರು ನೀಡಿ ಮೂವರನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಎಂದು ನಿರ್ಮಾಪಕ ಭರತ್ ನೀಡಿದ ದೂರಿನ ಅನ್ವಯ ಎನ್.ಸಿ.ಆರ್ ದಾಖಾಗಿದೆ.
PublicNext
18/10/2024 11:19 am