ಮಂಗಳೂರು: ಮರ್ಮುಗೋವಾದ ಬೈನಾ ಬೀಚ್ ಬಳಿಯ ರವೀಂದ್ರ ಭವನದಲ್ಲಿ ನಡೆದ ನ್ಯಾಷನಲ್ ಬೆಂಚ್ಪ್ರೆಸ್ ಚಾಂಪಿಯನ್ಶಿಪ್- 2024ರಲ್ಲಿ ಮಂಗಳೂರಿನ ಯುವಕ ಪ್ರದೀಪ್ ಕುಮಾರ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.
ಗೋವಾದ ಪವರ್ಲಿಫ್ಟಿಂಗ್ ಅಸೋಸಿಯೇಷನ್ ನ್ಯಾಷನಲ್ ಬೆಂಚ್ಪ್ರೆಸ್ ಚಾಂಪಿಯನ್ಶಿಪ್-2024 ಅನ್ನು ಆಯೋಜಿಸಿತ್ತು. ಈ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಪದೀಪ್ ಕುಮಾರ್ 83ಕೆಜಿ ದೇಹತೂಕ ವಿಭಾಗದಲ್ಲಿ ಭಾಗವಹಿಸಿ 235ಕೆಜಿ ಬೆಂಚ್ಪ್ರೆಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಂಗಳೂರಿನ ಬಾಲಾಂಜನೇಯ ಜಿಮ್ನಾಸಿಯಂನ ಸದಸ್ಯರಾಗಿರುವ ಪ್ರದೀಪ್ ಕುಮಾರ್ ಅವರಿಗೆ ಸತೀಶ್ ಕುಮಾರ್ ಕುದ್ರೋಳಿಯವರ ಮಾರ್ಗದರ್ಶಕರಾಗಿದ್ದಾರೆ. ಇವರು ಮಂಗಳೂರಿನ ಕಷಾರ್ಪ್ ಫಿಟ್ನೆಸ್ನ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Kshetra Samachara
17/10/2024 10:24 pm