ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಣಿಗೆ ಕಟ್ಟಿದ್ದ ಬಟ್ಟೆ,ಕತ್ತಿ ಕೆಳಗಿಳಿಸಿ ಸಂವಿಧಾನದ ಪುಸ್ತಕದ ಜೊತೆ ಬಂದಿದ್ದಾಳೆ ಹೊಸ ನ್ಯಾಯದೇವತೆ

ಇಲ್ಲಿಯ ತನಕ ಸುಪ್ರೀಂ ಕೋರ್ಟ್‌ ನಲ್ಲಿ ನ್ಯಾಯ ದೇವತೆಗೆ ಕಣ್ಣಿಗೆ ಬಟ್ಟೆ ಕಟ್ಟಿರುವುದನ್ನು ನೀವು ನೋಡಿದ್ದೀರಿ ಇನ್ನು ಮುಂದೆ ನ್ಯಾಯ ದೇವತೆ ಕಣ್ಣು ತೆರೆದು ಸತ್ಯ ಸುಳ್ಳಿನ ನಡುವಿನ ತಿಕ್ಕಾಟವನ್ನು ನೋಡಲಿದ್ದಾಳೆ.ಯಸ್‌, ಒಂದು ಕೈಯಲ್ಲಿ ಕತ್ತಿ ಹಿಡಿದು,ಕಣ್ಣಿಗೆ ಬಟ್ಟೆ ಕಟ್ಟಿ ನಿಂತಿರುವ ದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿ,ಕೈಯಲ್ಲಿದ್ದ ಖಡ್ಗದ ಬದಲಾಗಿ ದೇಶದ ದಂವಿಧಾನದ ಪುಸ್ತಕವನ್ನು ನೀಡಲಾಗಿದೆ. ಖಡ್ಗವು ಹಿಂಸಾಚಾರದ ಸಂಕೇತವಾಗಿದೆ ಆದರೆ ನ್ಯಾಯಾಲಯಗಳು ಸಾಂವಿಧಾನಿಕ ಕಾನೂನುಗಳ ಪ್ರಕಾರ ನ್ಯಾಯವನ್ನು ನೀಡುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಆದೇಶದ ಮೇರೆಗೆ ಈ ಪ್ರತಿಮೆಯನ್ನು ಬದಲಿಸಲಾಗಿದೆ.ಹೊಸ ಪ್ರತಿಮೆಯು ಕಾನೂನು ಕುರುಡಲ್ಲ ಹಾಗೂ ಸಂಪತ್ತು, ಅಧಿಕಾರ ಅಥವಾ ಸ್ಥಾನಮಾನವನ್ನು ಪರಿಗಣಿಸದೆ ನ್ಯಾಯವನ್ನು ತಲುಪಿಸಬೇಕು ಎಂಬುವುದು ಈ ಪ್ರತಿಮೆಯ ಮೂಲಕ ಸಂದೇಶ ಸಾರಲಾಗುತ್ತಿದೆ.

Edited By : Suman K
PublicNext

PublicNext

17/10/2024 07:50 pm

Cinque Terre

33.89 K

Cinque Terre

1