ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ರಾಜ್ಯವೇ ತಿರುಗಿ ನೋಡುವಂತೆ ವಾಲ್ಮೀಕಿ ಜಯಂತಿ ಆಚರಿಸಲು ನಾನು ಸಿದ್ದ- ಶಾಸಕ ಗೋಪಾಲಕೃಷ್ಣ

ಮೊಳಕಾಲ್ಮುರು:ಪಟ್ಟಣದ ತಾಲೂಕು ಆಡಳಿತ ಸೌಧ ಆವರಣದಲ್ಲಿ ಗುರುವಾರ ತಾಲೂಕು ಆಡಳಿತ, ತಾಪಂ, ಪಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ, ನಾಯಕ ಸಮುದಾಯದ ಮುಖಂಡರು ಸಹಕಾರ ನೀಡಿದ್ದಲ್ಲಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ವಾಲ್ಮೀಕಿ ಜಯಂತಿ ಆಚರಣೆ ಮಾಡಲು ನಾನು ಸಿದ್ಧನಿದ್ದೇನೆ,ಯುವಕರು ವಾಲ್ಮೀಕಿ ಮಹರ್ಷಿಯ ಪುತ್ಥಳಿಗಳನ್ನು ಇತ್ತೀಚಿಗೆ ನಾನಾ ಹಳ್ಳಿಗಳಲ್ಲಿ ಸ್ಥಾಪಿಸಿ ಜಯಂತಿ ಆಚರಿಸಲು ಮುಂದಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಸಮುದಾಯದಲ್ಲಿ ಜನಿಸಿದ ನಮಗೆಲ್ಲ ವಾಲ್ಮೀಕಿಯೇ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಲೀಲಾವತಿ, ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಎಚ್.ಹನುಮಂತಪ್ಪ, ಸಿಪಿಐ ವಸಂತ್ ವಿ.ಅಸೋದೆ, ಎಸ್‌ಟಿ ಇಲಾಖಾಧಿಕಾರಿ ನಾಸಿರುದ್ದೀನ್, ಪ್ರಾಚಾರ್ಯ ಗೋವಿಂದಪ್ಪ, ಜಿಪಂ ಮಾಜಿ ಸದಸ್ಯರಾದ ಕೆ.ಜಗಲೂರಯ್ಯ, ವಿ.ಮಾರನಾಯಕ ಮುಖಂಡರಾದ ಬಡೋಬಯ್ಯ, ಪಟೇಲ್ ಪಾಪನಾಯಕ, ಗೋವಿಂದಪ್ಪ, ಗುರುರಾಜಪ್ಪ, ಬಿ.ವಿಜಯ್. ಕಲ್ಲೇಶಪ್ಪ, ಬಿ.ಎಸ್.ಮುರುಳೀಧರ ನಾಯಕ, ಸುಬಾನ್ ಸಾಬ್, ಟಿ.ಕೆ.ಖಲೀಲವುಲ್ಲ, ಜಿ.ಪ್ರಕಾಶ್, ಎಂ.ಅಬ್ದುಲ್ಲಾ, ಜಿ.ಪಿ.ಸುರೇಶ್, ವೀರೇಶ್, ಮಣಿಕಂಠ, ರಮೇಶ್, ಬಸವರಾಜ್ ಇದ್ದರು.

Edited By : PublicNext Desk
Kshetra Samachara

Kshetra Samachara

17/10/2024 03:53 pm

Cinque Terre

800

Cinque Terre

0

ಸಂಬಂಧಿತ ಸುದ್ದಿ