ಶ್ರೀನಿವಾಸಪುರ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ನೋಡ ನೋಡುತ್ತಿದ್ದಂತೆಯೇ 11 ಕೆ.ವಿ ಸರಬರಾಜು ಆಗುವ ವಿದ್ಯುತ್ ಕಂಬ ಧರೆಗೆ ಬಿದ್ದು ವಿದ್ಯುತ್ ತಂತಿ ನಡು ರಸ್ತೆಯಲ್ಲಿ ಬಿದ್ದಿದೆ.
ಇನ್ನು ದೊಡ್ದ ಅವಾಂತರವಾಗುವ ಮೊದಲೇ ಸಾರ್ವಜನಿಕರು ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ಲೈನ್ ಆಫ್ ಮಾಡಿಸಿದ್ದಾರೆ. ಬೆಂಗಳೂರು ಮದನಪಲ್ಲಿಯ ಮುಖ್ಯ ರಸ್ತೆ ಇದಾಗಿದ್ದು ಸಾವಿರಾರು ವಾಹನಗಳು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತವೆ. ವಾಹನ ಸವಾರರು ವಿದ್ಯುತ್ ತಂತಿಯ ಮೇಲೆನೇ ಭಯದಿಂದ ಚಾಲನೆ ಮಾಡಿದರು. ಕಳಪೆ ಕಾಮಗಾರಿಯಿಂದ ಈ ಘಟನೆ ಆಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬಂದಿದೆ. ಇನ್ನಾದರೂ ಅಧಿಕಾರಿಗಳು ಇಂತಹ ಅನಾಹುತಗಳು ಆಗದೇ ಇರುವ ಬಗ್ಗೆ ಎಚ್ಚರ ವಹಿಸುತ್ತಾರಾ ಎಂದು ಕಾದು ನೋಡಬೇಕಿದೆ.
PublicNext
16/10/2024 06:17 pm