ಬೆಂಗಳೂರು : ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ಹಲೆವಡೆ ಜಲದಿಗ್ಭಂಧನ ಸಿಲುಕಿದ್ದಾರೆ. ಈ ವಿಚಾರಕ್ಕೆ ಜೆಡಿಎಸ್ ಕಾಂಗ್ರೆಸ್ನ ಕಾಲೆಳೆದಿದೆ.
ಮಳೆ ಅವಾಂತರಕ್ಕೆ ಕಾಂಗ್ರೆಸ್ ಕಾರಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಖಾರವಾಗಿ ಟೀಕಿಸಿದ್ದರು.ಇದಕ್ಕುತ್ತರವಾಗಿ ಡಿ.ಕೆ ಶಿವಕುಮಾರ್ ಪ್ರಕೃತಿಗೆ ಕಡಿವಾಣ ಹಾಕಲಾಗುವುದಿಲ್ಲ.. ಸುಮ್ಮನೆ ಬೆಂಗಳೂರಿನ ಮರ್ಯಾದೆ ತೆಗೆಯಬೇಡಿ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ, ಬಿಜೆಪಿ ಸರ್ಕಾರದ ವಿರುದ್ಧ ಕೂಗಾಡಿದ್ದ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರ ವಿಡಿಯೋವೊಂದನ್ನು ಜೆಡಿಎಸ್ ಟ್ವೀಟ್ ಮಾಡಿದೆ.
'ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ', ಅಂದು ಈ ಅವಿವೇಕಿಯೇ ಅಲ್ಲವೇ ಬೆಂಗಳೂರಿನ ಮರ್ಯಾದೆ ತೆಗೆದಿದ್ದು ಎಂದು ಝಾಡಿಸಿದೆ. ಅಧಿಕಾರಕ್ಕೆ ಬರುವ ಮುಂಚೆ ಒಂದು ನಾಟಕ, ಅಧಿಕಾರಕ್ಕೆ ಬಂದಾಗ ಬೃಹನ್ ನಾಟಕ.
ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಾಜಧಾನಿಯನ್ನು ಅಧೋಗತಿಗೆ ತಂದಿರುವ ಪರ್ಸೆಂಟೇಜ್ ಮಂತ್ರಿಗಳೇ, ನಿಮ್ಮ ಹೊಣೆಗೇಡಿತನಕ್ಕೆ ವಿರೋಧ ಪಕ್ಷಗಳನ್ನು ಟೀಕಿಸುವ ಭರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ಘನತೆಗೆ ಕಳಂಕ ತರಬೇಡಿ ಎಂದು ಜೆಡಿಎಸ್ ಕುಟುಕಿದೆ.
PublicNext
16/10/2024 06:05 pm