ಮುಲ್ಕಿ: ಕಿನ್ನಿಗೋಳಿ - ಮುಲ್ಕಿ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ರಾಜಾಂಗಣ ಮುಖ್ಯರಸ್ತೆಯಲ್ಲಿ ಭಾರೀ ಗಾಳಿಗೆ ಆಲದ ಮರದ ರೆಂಬೆಯೊಂದು ಏಕಾಏಕಿ ಬೈಕ್ ಮೇಲೆ ಬಿದ್ದು ಬೈಕ್ಗೆ ಹಾನಿಯಾಗಿದೆ. ಬೈಕ್ ಸವಾರ ಪವಾಡ ಸದೃಶ ಪಾರಾಗಿದ್ದಾರೆ. ಕಿನ್ನಿಗೋಳಿ ಮುಖ್ಯ ರಸ್ತೆಯ ರಾಜಾಂಗಣ ಬಳಿಯ ಆಲದ ಮರದ ಕೆಳಗೆ ಸುಧಾಕರ ಆಚಾರ್ಯ ಎಂಬುವವರ ಕಮ್ಮಾರ ಕೆಲಸದ ಕೋಣೆ ಇದ್ದು, ಬುಧವಾರ ಬೆಳಗ್ಗೆ ಸುಧಾಕರ ಆಚಾರ್ಯ ತಮ್ಮ ಬೈಕ್ ನಿಲ್ಲಿಸಿ ಒಳ ಹೋಗುವ ಸಂದರ್ಭ ಅಲದ ಮರದ ರೆಂಬೆ ಬೈಕ್ ಮೇಲೆ ಬಿದ್ದಿದ್ದು ಬೈಕ್ ಸವಾರ ಪವಾಡ ಸದೃಶ ಪಾರಾಗಿದ್ದಾರೆ.
ಮರದ ಗೆಲ್ಲು ಸ್ವಲ್ಪ ಎಡಕ್ಕೆ ಅಥವಾ ಬಲ ಬದಿಗೆ ಬಿದ್ದಿದ್ದಲ್ಲಿ ಕಿನ್ನಿಗೋಳಿ ಮುಖ್ಯ ರಸ್ಥೆ ಅಥವಾ ಸುಧಾಕರ ಆಚಾರ್ಯರ ಅಂಗಡಿ ಮೇಲೆ ಬಿದ್ದಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು. ಸ್ಥಳಕ್ಕೆ ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ, ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಕೇಶವ ದೇವಾಡಿಗ, ಸ್ಥಳೀಯ ಪಂಚಾಯತ್ ಸದಸ್ಯರು ಭೇಟಿ ನೀಡಿದ್ದು ಬೈಕ್ ಹಾಗೂ ಮರದ ಗೆಲ್ಲನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.
Kshetra Samachara
16/10/2024 01:03 pm