ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಲೆಗಳಿಗೆ ರಜೆ ಘೋಷಿಸುವಂತೆ ಖಾಸಗಿ ಶಾಲಾ ಸಂಘಟನೆಯಿಂದ ಆಗ್ರಹ

ಬೆಂಗಳೂರು- ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಕ್ಕಳು ಶಾಲೆಗಳಿಗೆ ಹೋಗುವುದೇ ದುಸ್ತರವಾಗಿದೆ. ಹೀಗಾಗಿ ಖಾಸಗಿ ಶಾಲೆಯ ಕಾಮ್ಸ್ ಅಧ್ಯಕ್ಷ ಶಶಿಕುಮಾರ್ ಶಾಲೆಗಳಿಗೆ ಈಗಾಗಲೇ ರಜೆ ಇರುವುದರಿಂದ ತೊಂದರೆಯಾಗುವುದಿಲ್ಲ. ಒಂದು ವೇಳೆ ಕೆಲ ಖಾಸಗಿ ಶಾಲೆಗಳಲ್ಲಿ ರಜೆ ಕಡಿತವಾಗಿದ್ರೆ ರಜೆ ಕೊಡುವುದು ಉತ್ತಮ ಎಂದು ಹೇಳಿದ್ದಾರೆ.

ಇತ್ತ ರುಪ್ಸಾ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಗಾಬರಿ ಹುಟ್ಟಿಸಿದೆ.ಈಗಾಗಲೇ ದಸರಾ ರಜಾದ ಐಸಿಎಸ್‌ಸಿ ಮತ್ತು ಸಿಬಿಎಸ್ ಸಿ ಶಾಳೆಗಳು ಮತ್ತು ಕಾಲೇಜುಗಳು 14 ನೇ ತಾರೀಖಿನಿಂದ ಪ್ರಾರಂಭವಾಗಿತ್ತು.ಅಂತಹ ಶಾಲಾ ಮತ್ತು ಕಾಲೇಜಿಗೆ ಬೆಂಗಳೂರಿನಲ್ಲಿ ರಜೆ ಘೋಷಿಸಲಾಗಿದೆ ನಾವು ಕೂಡ ಇದಕ್ಕೆ ಸ್ವಾಗತ ಬಯಸುತ್ತೇವೆ. ಎಲ್ಲೆಲ್ಲಿ ಮಳೆಯಾಗ್ತಿದೆ ಅಲ್ಲಿ ಶಾಲಾ - ಕಾಲೇಜಿಗೆ ರಜೆ ಘೋಷಿಸುವಂತೆ ಒತ್ತಾಯಿಸಿದ್ದಾರೆ.

Edited By : Ashok M
PublicNext

PublicNext

16/10/2024 10:13 am

Cinque Terre

23.26 K

Cinque Terre

4

ಸಂಬಂಧಿತ ಸುದ್ದಿ