ಚಿಕ್ಕಮಗಳೂರು: ಬಸ್ ನಿಲ್ದಾಣದ ಸಮೀಪ ಗುಟ್ಕಾ ಉಗಿದವನಿಂದಲೇ ಪಿಎಸ್ಐಯೊಬ್ಬರು ಕ್ಲೀನ್ ಮಾಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಗುಟ್ಕಾ ಉಗಿದಿದ್ದನ್ನು ಗಮನಿಸಿದ ಕೊಪ್ಪ ಠಾಣೆಯ ಪಿಎಸ್ಐ ಬಸವರಾಜ್ ಆತನಿಂದಲೇ ಬಾಟಲಿಯಲ್ಲಿ ನೀರು ತರಿಸಿ ಸ್ವಚ್ಛ ಮಾಡಿಸಿದ್ದಾರೆ. ಗುಟ್ಕಾ ತಿನ್ನೋದೆ ತಪ್ಪು ಅದನ್ನು ಎಲ್ಲೆಂದರಲ್ಲಿ ಉಗಿಯದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪಿಎಸ್ಐ ಬಸವರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
PublicNext
15/10/2024 07:53 pm