ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಗಾರಪೇಟೆ: ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು

ಬಂಗಾರಪೇಟೆ: ಬಂಗಾರಪೇಟೆ ಪಟ್ಟಣದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಂಗ ಸಂಸ್ಥೆಯ ಕೇಂದ್ರದ ಆವರಣದಲ್ಲಿ ಕಾರ್ಮಿಕನೊಬ್ಬ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ನಾರಾಯಣಸ್ವಾಮಿ (35) ವರ್ಷ ಮೃತ ದುರ್ದೈವಿ ಎನ್ನಲಾಗಿದೆ. ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಘಟ್ಟ ಮಾದಮಂಗಲ ಗ್ರಾಮದವರೆಂದು ತಿಳಿದು ಬಂದಿದೆ. ಇಂದು ಮುಂಜಾನೆ ಕೆಲಸಕ್ಕೆಂದು ಪಟ್ಟಣದ ಉಗ್ರಾಣ ಕೇಂದ್ರಕ್ಕೆ ಬಂದ್ದಿದಾಗ ಈ ಘಟನೆ ನಡೆದಿದೆ. ಉಗ್ರಾಣ ಕೇಂದ್ರದ ಕಟ್ಟಡದ ಮೇಲೆ ಶೀಟ್ ಗಳನ್ನು ಬದಲಾಯಿಸಲು ಹೋದಾಗ ಶೀಟ್‌ಗಳು ಮುರಿದು ಕೆಳಗೆ ಬಿದ್ದಿದ್ದಾರೆ. ತಲೆಗೆ ಬಲವಾದ ಗಾಯಗಳಾದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು‌ ನಡೆಸುತ್ತಿದ್ದಾರೆ.

Edited By : Vinayak Patil
PublicNext

PublicNext

14/10/2024 08:44 pm

Cinque Terre

37.86 K

Cinque Terre

0

ಸಂಬಂಧಿತ ಸುದ್ದಿ