ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ದಸರಾ ಅಂಗವಾಗಿ ಅಂಬು ಒಡೆಯುವ ವೇಳೆ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಆರು ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಅಂಬು ಒಡೆಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಳೆ ಕಂಬದ ಮೇಲೆ ತೆಂಗಿನ ಕಾಯಿ ಇರಿಸಿ ಬಂದೂಕಿನಿಂದ ಗುರಿ ಇಟ್ಟು ಗುಂಡು ಹಾರಿಸುವುದು ಸಂಪ್ರದಾಯ. ಈ ವೇಳೆ ಅವಘಡ ಸಂಭವಿಸಿದೆ. ಪಾಂಡುರಂಗ(45), ಆಶಾ (42) ಹಾಗೂ ನಾಲ್ವರು ಅಪ್ರಾಪ್ತರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನ ಸಮಿತಿ ಸದಸ್ಯರಾದ ಶ್ರೀನಿವಾಸಶೆಟ್ಟಿ ಮತ್ತು ರಮೇಶ್ ಶೆಟ್ಟಿ ಅವರಿಗೆ ಸೇರಿದ ಎರಡು ಬಂದೂಕಿನಿಂದ ಗುಂಡು ಹಾರಿಸಲು ಪ್ರಯತ್ನಿಸಲಾಗಿತ್ತು.
ಒಂದು ಬಂದೂಕಿನಿಂದ ಒಮ್ಮೆ ಗುಂಡು ಸಿಡಿಯದಿದ್ದಾಗ ಸರಿಪಡಿಸಲು ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ಗುಂಡು ಸಿಡಿಸಿದೆ ಎಂದು ಶಯನ ಕುಂಚೂರು, ಶ್ರೀನಿವಾಸಶೆಟ್ಟಿ ಮತ್ತು ರಮೇಶ್ ಶಟ್ಟಿ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
14/10/2024 05:22 pm