ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಗೌರಸಮುದ್ರ ಗ್ರಾಮದಲ್ಲಿನ ಬಾರ್ ಮುಚ್ಚುವಂತೆ ಗ್ರಾಮಸ್ಥರ ಪಟ್ಟು

ಚಿತ್ರದುರ್ಗ: ಗೌರಸಮುದ್ರ ಗ್ರಾಮದಲ್ಲಿರುವ ತಿರುಮಲ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಗ್ರಾಮದ ಮಧ್ಯ ಭಾಗದಲ್ಲಿರುವ ಬಾರ್ ನಿಂದ ಸಾರ್ವಜನಿಕರಿಗೆ ಕಿರಿ ಕಿರಿಯಾಗುತ್ತಿದೆ ಎಂದು ಆಗ್ರಹಿಸಿ ಗ್ರಾಮಸ್ಥರು ಬಾರ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಗೌರಸಮುದ್ರ ಗ್ರಾಮದಲ್ಲಿ ಮಾರಮ್ಮನ ದೇವಸ್ಥಾನವಿದ್ದು, ನೂರಾರು ಮಂದಿ ಭಕ್ತರು ಗ್ರಾಮಕ್ಕೆ ಆಗಮಿಸುತ್ತಾರೆ, ಆದರೆ ಮಧ್ಯದಂಗಡಿ ಇರುವುದು ಭಕ್ತರಿಗೆ ಹಾಗೂ ಮಹಿಳೆಯರಿಗೆ ತುಂಭಾನೇ ಕಿರಿ ಕಿರಿ ಉಂಟು ಮಾಡುತ್ತಿದೆ. ಇನ್ನೂ ಗ್ರಾಮದ ನಡುವೆ ಬಾರ್ ಇರುವುದರಿಂದ ಚಿಕ್ಕ ವಯಸ್ಸಿನ ಮಕ್ಕಳು ಕೂಡಾ ಕುಡಿತದ ಚಠಕ್ಕೆ ಬಲಿಯಾಗುತ್ತಿದ್ದಾರೆ‌. ಕೂಡಲೇ ಬಾರ್ ಗ್ರಾಮದ ಹೊರ ವಲಯಕ್ಕೆ ಶಿಪ್ಟ್ ಮಾಡುವಂತೆ ಮಹಿಳೆಯರು ಆಗ್ರಹಿಸಿದ್ದಾರೆ. ಇನ್ನೂ ಪ್ರತಿಭಟನಾ ಸ್ಥಳಕ್ಕೆ ತಳಕು PSI ಲೋಕೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಇದೇ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಓಬಣ್ಣ, ಸದಸ್ಯರಾದ ಶಶಿಕುಮಾರ್, ಈರಣ್ಣ, ನಾಗರಾಜ್ ಸೇರಿ ಹಲವರು ಹಾಜರಿದ್ದರು

Edited By : Nagesh Gaonkar
PublicNext

PublicNext

14/10/2024 03:37 pm

Cinque Terre

17.1 K

Cinque Terre

0

ಸಂಬಂಧಿತ ಸುದ್ದಿ