ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING : ಶಾಸಕ ಮುನಿರತ್ನ ಬಂಧನ ಪ್ರಕರಣ - ಕಳೆದ ಎರಡು ಗಂಟೆಯಿಂದ ಖುದ್ದು ಡಿಸಿಪಿ ಟೆಕ್ಕಣ್ಣನವರ್ ವಿಚಾರಣೆ

ಬೆಂಗಳೂರು : ಶಾಸಕ ಮುನಿರತ್ನ ಬಂಧನ ಪ್ರಕರಣವನ್ನು ಇಂದು ಖದ್ದು ಕೇಂದ್ರವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ವಿಚಾರಣೆ ನಡೆಸಿದ್ದಾರೆ.

ಕಳೆದ ಎರಡು ಗಂಟೆಯಿಂದ ಇಬ್ಬರು ಎಸಿಪಿ ಹಾಗೂ ಓರ್ವ ಡಿಸಿಪಿ ಸಮ್ಮುಖದಲ್ಲಿ ಮುನಿರತ್ನ ಬಂಧನ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದ್ದು, ಅಲ್ಲದೇ ವಿಚಾರಣೆಯ ಪ್ರತಿ ಹಂತವನ್ನು ಪೊಲೀಸರಿಂದ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ನಾನು ಅವನ ಜೊತೆ ಮಾತನಾಡಿದ್ದೇನೆ, ಅದಾದ ಬಳಿಕ ದೂರುದಾರ ನಾನು ಮಾತನಾಡಿಲ್ಲ, ಇದೆಲ್ಲ ರಾಜಕೀಯ ಷಡ್ಯಂತರ ಇದು ಹಳೆಯ ಆಡಿಯೋ ಎಂದು ಮುನಿರತ್ನ ಹೇಳಿಕೆ ನೀಡಿದ್ದಾರೆ..

ಇನ್ನು ಪೊಲೀಸ್ ಅಧಿಕಾರಿಗಳಿಗೆ ಮರುಪ್ರಶ್ನೆ ಮಾಡುತ್ತಿರುವ ಶಾಸಕ ಮುನಿರತ್ನ ಇದೆಲ್ಲಾ ಯಾರು ಮಾಡಿಸುತ್ತಿದ್ದಾರೆ ನಿಮಗೆ ಗೊತ್ತಿಲ್ಲವಾ ..? ಮೂಡಾ ಮತ್ತು ನಾಗಮಂಗಲ ಗಲಭೆ ಡೈವರ್ಟ್ ಮಾಡಲು ನನ್ನ ಬಲಿಪಶು ಮಾಡ್ತಾ ಇದಾರೆ. ನಾನು ಯಾರಿಗೂ ಯಾವಾಗಲು ಬೈದಿಲ್ಲ, ಹಲ್ಲೆ ಮಾಡಿಲ್ಲ ಇದು ನನ್ನ ಆಡಿಯೋ ಕೂಡ ಅಲ್ಲ ಎಂದು ಎನ್ನುತ್ತಿರುವ ಶಾಸಕ ಮುನಿರತ್ನ..

Edited By : Abhishek Kamoji
PublicNext

PublicNext

16/09/2024 12:34 pm

Cinque Terre

46.95 K

Cinque Terre

1

ಸಂಬಂಧಿತ ಸುದ್ದಿ