ಹುಬ್ಬಳ್ಳಿ: ನಟ ದರ್ಶನ್ ಪ್ರಕರಣದ ಜಾರ್ಜ್ ಶೀಟ್ ಸಾಕ್ಷಿಗಳು, ಫೋಟೊಗಳು ಸದ್ಯ ನ್ಯಾಯಾಲಯದ ಬಳಿ ಇವೆ. ಇಂದು ಅವು ಹೊರಗಡೆ ಬಂದಿವೆ. ಅಂದರೆ, ಇದರಲ್ಲಿ ರಾಜ್ಯ ಸರ್ಕಾರ, ಸಂಬಂಧಿತ ಇಲಾಖೆಯೇ ಬಿಡುಗಡೆ ಮಾಡಿದೆ. ಜನರ ಮನಸ್ಸನ್ನು ಡೈವರ್ಟ್ ಮಾಡಲು ಇದನ್ನು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಯಾವಾಗಲೂ ಡೈವರ್ಟ್ ಮಾಡುವ ಪ್ರಯತ್ನ ಮಾಡುತ್ತದೆ. ಅದರ ಒಂದು ಭಾಗವಾಗಿ ಫೋಟೊ ಬಿಡುಗಡೆ ಮಾಡಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಸದರು, ಕೋವಿಡ್ ಹಗರಣ ಸಹ ಡೈವರ್ಟ್ ಮಾಡುವ ಉದ್ದೇಶದಿಂದ ಹೊರತರಲಾಗಿದೆ. ಒಂದು ವರ್ಷದ ಇಲ್ಲದ ಕೋವಿಡ್ ಹಗರಣ ವಿಚಾರ ಈಗ ಯಾಕೆ?
ಸಿಎಂ ಸಿದ್ದರಾಮಯ್ಯ ಸಾಚಾ ಎನ್ನುತ್ತಾರೆ. ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ ಬಗ್ಗೆ ಕೆಂಪಣ್ಣ ಆಯೋಗ ವರದಿ ನೀಡಿದೆ. ಸಿದ್ದರಾಮಯ್ಯ ಸಾಚಾ ಆಗಿದ್ದರೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ತಾನು ಸಾಚಾ ಅಂತ ತೋರಿಸಲಿ ಎಂದು ಸವಾಲು ಹಾಕಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/09/2024 09:57 pm