ನಗರದ ಸಂಸ್ಕೃತ ಭವನದಲ್ಲಿ ಇಂದು ಆಸರೆ ಫೌಂಡೇಶನ್ ವತಿಯಿಂದ ದಿವಂಗತ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗಣ್ಯರು ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಬಳಿಕ ಭಾರತೀಯ ವೈದ್ಯಕೀಯ ಸಂಘದ ಸದಸ್ಯ ಡಾಕ್ಟರ್ ಅನುಪ್ ಮಾತನಾಡಿ ರತನ್ ಟಾಟಾ ಅವರು ವಿದೇಶಗಳಲ್ಲೆಲ್ಲಾ ಸುತ್ತಾಡಿ ಬಂದರು ಭಾರತ ದೇಶ ಅವರನ್ನು ಸ್ವಾಗತಿಸಿ ಇಲ್ಲಿ ನೆಲೆಯರಲು ಅವಕಾಶ ಮಾಡಿಕೊಟ್ಟಿದ್ದು ಅದಾದ ಬಳಿಕ ಸ್ವಂತ ಸಾಮರ್ಥ್ಯದಿಂದ ಬೆಳೆದು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರತನ್ ಡಾಟ ಅವರು ಅನೇಕ ಸಂದರ್ಭಗಳಲ್ಲಿ ಕಷ್ಟ ಇದ್ದವರಿಗೆ ಸ್ಪಂದಿಸಿ ಮಾದರಿಯಾಗಿದ್ದಾರೆ ಅಂತವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು
Kshetra Samachara
20/10/2024 07:34 pm