ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಬಸವಣ್ಣರವರ ಕುರಿತು ಶರಣರ ಕುರಿತು ನಾಟಕಗಳನ್ನು ಶಾಲಾ ಮಕ್ಕಳಿಗೆ ತೋರಿಸಿದ್ದರೆ ಅವರು ಅಭಿರುಚಿ ಪಡೆಯುತ್ತಾರೆ ಎಂದು ಕಲಬುರಗಿ ರಂಗ ಸಂಘಟಕ ಡಾ. ಕೆ. ಲಿಂಗಪ್ಪ ಅವರು ಹೇಳಿದರು.
ಡಾ. ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ, ಸಮೋರೋಪ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ,ಬೆಂಗಳೂರು ರಂಗಾಯಣ ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ನನವರ ಪುತ್ಥಳಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು ಹಾಗೂ ಕಲಬುರಗಿ ರಂಗಕರ್ಮಿಗಳು ರಂಗಾಸಕ್ತರು ಎರಡು ದಿನಗಳ ನಡೆದ ನಾಟಕದಲ್ಲಿ ಎಲ್ಲರೂ ಸಹಕರಿಸಿ ಒಳ್ಳೆಯ ವಾತಾವರಣ ಸೃಷ್ಠಿಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸುವುದಕ್ಕಾಗಿ ಧನ್ಯವಾದಗಳು ಸಲ್ಲಿಸಿದರು
Kshetra Samachara
18/01/2025 10:04 pm