ಬಿಗ್ ಬಾಸ್ ಕನ್ನಡ ಪ್ರಾರಂಭವಾಗುತ್ತಾ ಇದ್ದಂತೆ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿ ಮಾಡುತ್ತಲೇ ಇದೆ. ಇದೀಗ ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರಗೆ ಹೋದ ಕೂಡಲೇ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾದ ಮೊದಲ ಸ್ಫರ್ಧಿ ಕುರಿಗಾಹಿ ಹನುಮಂತ ದೊಡ್ಮನೆಯಲ್ಲಿ ಮಂಗನಾಟ ಆಡುತ್ತಿದ್ದಾರೆ. ಸರಿಗಮಪ ಖ್ಯಾತಿಯ ಹನುಮಂತ ದೇಶ - ವಿದೇಶವನ್ನು ಸುತ್ತಿ ಕೊಂಡು ಬಂದಿದ್ದಾರೆ. ಆದರೂ ಅವರಿಗೆ ಇಂಡಿಯನ್ ಟಾಯ್ಲೆಟ್ ಯಾವುದು ? ವೆಸ್ಟ್ರನ್ ಟಾಯ್ಲೆಟ್ ಯಾವುದು ಎನ್ನುವ ಅರಿವಿಲ್ಲವೇ?
ಸ್ವಿಮ್ಮಿಂಗ್ ಪೂಲ್ ಗೆ ಸೋಪು, ಶಾಂಪು ಹಾಕಿ ಯಾರಾದರೂ ಸ್ನಾನ ಮಾಡುತ್ತಾರೆಯೇ? ಅದೇ ರೀತಿ ಪೂಲ್ ಗೆ ಹೋಗುವಾಗ ಹೆಣ್ಣು ಮಕ್ಕಳಿಗೆ ನೀವು ಒಳಗೆ ಹೋಗಿ ನಂಗೆ ಜಳಕ ಮಾಡಬೇಕು ಅಂತಾರೆ. ಅವಾಗ ಗೌತಮಿ, ಮೋಕ್ಷಿತ ಅಲ್ಲೇ ಕುಳಿತು ಕೊಂಡು ನೀವು ಸ್ನಾನ ಮಾಡಿ ಹನುಮಂತು ನಾವು ಕಣ್ಣು ಮುಚ್ಚುತ್ತೇವೆ ಅಂತಾರೆ . ಮುಗ್ಧ ಹಳ್ಳಿ ಹುಡುಗ ಅನ್ನುವುದು ನಿಜ ಆದರೇ..... ಇಷ್ಟು ಮುಗ್ಧತೆ ದೊಡ್ಮನೆಯಲ್ಲಿ ನಡೀಯುತ್ತಾ ಅನ್ನೋದು ಜನರ ತಲೆಯಲ್ಲಿ ಓಡುತ್ತಿರುವ ಪ್ರಶ್ನೆಯಾಗಿದೆ.
ಅದೇ ರೀತಿ ಮನೆಯಲ್ಲಿ ಏನೂ ಗೊತ್ತಿಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಾ ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರಾ ಹನುಮಂತು? ಇನ್ನೇನೆಲ್ಲ ಬೆಳವಣಿಗೆ ಆಗುತ್ತದೆ ಅನ್ನೋದನ್ನು ಕಾದು ನೋಡಬೇಕಾಗಿದೆ.
PublicNext
22/10/2024 01:03 pm