ದಾವಣಗೆರೆ ; ಬಿಎಸ್ವೈ ಪತ್ನಿ ಸಾವಿನ ವಿಚಾರ ಪ್ರಸ್ತಾಪಿಸಿ ಶೋಭಾ ಕರಂದ್ಲಾಜೆ ಹೆಸರು ತಂದಿದ್ದ ಬೈರತಿ ಸುರೇಶ್ ಹೇಳಿಕೆಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿಗೆ ಬೈರತಿ ಸುರೇಶ್ ಕಾರಣ ಎನ್ನಬೇಕಾಗುತ್ತೆ ಎಂದು ಕಿಡಿಕಾರಿದರು.
ಬೈರತಿ ಸುರೇಶ್ ವಿಶೇಷ ವಿಮಾನದಲ್ಲಿ ಬಂದು ಕಡತಗಳನ್ನ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದು ನಿಜ. ಇಡಿ ಇವತ್ತಲ್ಲ ನಾಳೆ ಬೈರತಿ ಸುರೇಶ್ ಮನೆಯ ಮೇಲೆ ರೇಡ್ ಆಗುತ್ತೆ ಎಂದು ಹೇಳಿದರು. ಬೈರತಿ ಸುರೇಶ್ ಹೊಸದಾಗಿ ಸಚಿವರಾಗಿದ್ದಾರೆ. ನಗರಾಭಿವೃದ್ಧಿ ಇಲಾಖೆ ಒಳ್ಳೆಯ ಇಲಾಖೆ. ಮುಖ್ಯಮಂತ್ರಿ ಹಿಂದೆ ಮುಂದೆ ಸುತ್ತುವುದು ಬಿಟ್ಟು ಇಲಾಖೆಯನ್ನ ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಮೈತ್ರಾದೇವಿ ಅವರು ಸ್ವರ್ಗದಲ್ಲಿ ಇದ್ದಾರೆ, ಅವರ ಬಗ್ಗೆ ಚರ್ಚೆ ಮಾಡೋವಷ್ಟು ದೊಡ್ಡವರಾ ನೀವು...? ಒಬ್ಬ ಮಹಿಳೆ ಬಗ್ಗೆ ಹಗುರವಾಗಿ ಮಾತ್ನಾಡೋದು ಸರಿ ಅಲ್ಲ. ಹಾಗಾದ್ರೆ ರಾಕೇಶ್ ಸಿದ್ದರಾಮಯ್ಯ ಸಾವಿಗೆ ನೀವೇ ಕಾರಣ ಅಂತ ಹೇಳ್ತೀವಿ ಎಂದರು.
ಈ ರೀತಿ ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ರೆ ರಾಜ್ಯದ ಜನ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.ಇದೇ ರೀತಿ ಮಾತನಾಡಿದ್ರೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
PublicNext
22/10/2024 04:10 pm