ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಧಕಿಗೆ ಅಭಿನಂದಿಸಿದ ಚಿಕ್ಕಮಗಳೂರು ಎಸ್ಪಿ

ಚಿಕ್ಕಮಗಳೂರು: ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರೇಗೌಡ ಎಂಬುವರ ಪುತ್ರಿ ಅನುಶ್ರೇಯಾ ಅವರು ಜೂನ್‌ ನಲ್ಲಿ ಕೇರಳದ ಎರ್ನಾಕುಲಂನಲ್ಲಿ ನಡೆದ 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 100 ಮೀ ಓಟದಲ್ಲಿ ಚಿನ್ನದ ಪದಕ ಮತ್ತು 4X400 ಮೀ ರಿಲೇನಲ್ಲಿ ಕಂಚಿನ ಪದಕ ಪಡೆದಿರುವ ಹಿನ್ನೆಲೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್‌ ಅಮಟೆ ತಮ್ಮ ಕಚೇರಿಯಲ್ಲಿ ಸಾಧಕಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಇದೇ ವೇಳೆ ಮಾತಾನಾಡಿದ ಎಸ್ಪಿ ವಿಕ್ರಮ್‌ ಅಮಟೆ ಇದೊಂದು ಹೆಮ್ಮೆಯ ವಿಷಯ, ಅನುಶ್ರೇಯಾ ವಿವಿಧ ಕ್ರೀಡಾಕೂಟಕೂಟಗಳಲ್ಲಿ ಪದಕಗಳನ್ನು ಪಡೆದು ರಾಜ್ಯ, ಜಿಲ್ಲೆ ಮತ್ತು ಶಾಲೆಗೆ ಕೀರ್ತಿ ತಂದಿರುವುದು ಖುಷಿಯ ಎಂದು ವಿದ್ಯಾರ್ಥಿಯ ಸಾಧನೆಯನ್ನ ಶ್ಲಾಘಿಸಿದ್ರು.

Edited By : PublicNext Desk
Kshetra Samachara

Kshetra Samachara

21/10/2024 12:56 pm

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ