ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರೆದಿದೆ ತರೀಕೆರೆಯಲ್ಲಿ ಸುರಿದಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಕಾರ ಮಳೆಯ ಪರಿಣಾಮ ತರೀಕೆರೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮಳೆಯಿಂದ ಜಲಾವೃತ ಗೊಂಡಿದೆ.
ಪರಿಣಾಮ ಹಲವು ವಾಹನಗಳು ನೀರಿನಲ್ಲಿ ಕೆಟ್ಟು ನಿಂತು ಸಂಚಾರಿಸಲು ಆಗದೆ ಪರದಾಡುವಂತಾಯಿತು. ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು ಗುಡುಗು ಸಿಡಿಲಿನೊಂದಿಗೆ ಧಾರಕಾರ ಮಳೆ ಸುರಿಯುತ್ತಿದೆ.
Kshetra Samachara
21/10/2024 02:57 pm