ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ತಾಲೂಕು ಕೇಂದ್ರವಾದ ಅಜ್ಜಂಪುರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಹಳ್ಳ ರಸ್ತೆ ಯಾವುದು ಎಂದು ತಿಳಿಯದಂತಾಗಿದೆ. ತಾಲೂಕಿನ ತಮಟದಹಳ್ಳಿ ಗಡಿಹಳ್ಳಿ ಗೌರಾಪುರ ಹಬ್ಬಿನಹೊಳಲು ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದ್ದು ರಸ್ತೆ ಮೇಲೆ ಮಂಡಿಯುದ್ದ ನೀರು ಹರಿಯುತ್ತಿದೆ ರಸ್ತೆ ಯಾವುದು ಹಳ್ಳಯಾವುದು ಎಂದು ತಿಳಿಯದೇ ಗ್ರಾಮಸ್ಥರು ಅಗತ್ಯ ಕೆಲಸಗಳಿಗೆ ತೆರಳಲು ಒಬ್ಬರ ಕೈ ಮತ್ತೊಬ್ಬರು ಹಿಡಿದು ಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
Kshetra Samachara
21/10/2024 08:27 pm